ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ರತ್ನಮಾನಸ ವಸತಿ ನಿಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಉಜಿರೆ: ರತ್ನಮಾನಸ ವಸತಿ ನಿಲಯದಲ್ಲಿ ನಡೆಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಶ್ರೀ ಧ ಮಂ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಸಂಪತ್ ಕುಮಾರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಆಧುನಿಕ ಕಾಲದಲ್ಲಿ ಮೊಬೈಲ್ ಮತ್ತು ಕಂಪ್ಯೂಟರ್‌ ಗಳು ನವೀಕರಣಗೊಂಡಂತೆ ನಾವು ಕೂಡ ಜೀವನದಲ್ಲಿ ನವೀನತೆಯನ್ನು ಹೊಂದುವುದು ಅನಿವಾರ್ಯ. ರಕ್ಷಾ ಬಂಧನದ ಮೂಲಕ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವುದರೊಂದಿಗೆ ನಮ್ಮ ಕುಟುಂಬ ನಮ್ಮ ದೇಶದ ರಕ್ಷಣೆ ಕೂಡ ನಮ್ಮ ಕರ್ತವ್ಯವಾಗಿದೆ. ಈ ರಕ್ಷಣೆಗೆ ಪ್ರೀತಿ ವಾತ್ಸಲ್ಯ ಸಹೋದರತೆ ಭ್ರಾತೃತ್ವತೆ ಸಹಬಾಳ್ವೆಯ ಧಾರೆಗಳನ್ನು ಸೇರಿಸಿಕೊಂಡು ರಕ್ಷಿಸಬೇಕಾಗುತ್ತದೆ ಎಂದರು.


ದೇಶವನ್ನು ಕಾಯುವ ಸೈನಿಕರು ಗನ್ ನ್ನು ಹಿಡಿದರೆ ವಿದ್ಯಾರ್ಥಿಗಳಿಗೆ ಭೋದನೆ ಮಾಡುವ ಶಿಕ್ಷಕರು ಪೆನ್ನನ್ನು ಹಿಡಿದು ದೇಶವನ್ನು ರಕ್ಷಿಸುತ್ತಾರೆ. ಎಂದು ಕಥೆಗಳ ಮೂಲಕ ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು.

ದೀಪ ಪ್ರಜ್ವಲನೆ ಮಾಡಿದ ಡಿ ಎಡ್ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿ ಕೆ.ವಿ ಯವರು ಮನುಷ್ಯನು ಜೀವನದಲ್ಲಿ ಮೌಲ್ಯಗಳನ್ನು ಬೇಳೆಸಬೇಕು ನಾವೆಲ್ಲರೂ ಭಾರತೀಯರು ಎಂಬ ಭಾಂದವ್ಯ ಬೆಳೆಸಿಕೊಳ್ಳುತ್ತ ರಕ್ಷಾ ಬಂಧನವನ್ನು ಆಚರಿಸಬೇಕೆಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಮಾನಸ ನಿಲಯದ ಪಾಲಕರಾದ ಯತೀಶ್ ಕೆ ಬಳಂಜರವರು ದೀಪಗಳು ಉರಿಯ ಬೇಕಾದರೆ ಎಷ್ಟು ಮಹತ್ವವೊ ಹಾಗೆನೇ ವಿದ್ಯಾರ್ಥಿಗಳು ದೇಶದ ರಕ್ಷಣೆ ಗೆ ಆದರ್ಶ ವ್ಯಕ್ತಿ ಗಳಾಗಿರಬೇಕೆಂದರು.

ವಿದ್ಯಾರ್ಥಿ ವಿನಾಯಕ ರವರು ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಿ ನಿಲಯದ ಅಧ್ಯಾಪಕರಾದ ರವಿಚಂದ್ರರವರು ಸ್ವಾಗತಿಸಿ ಉದಯ ರಾಜ್ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿ ನಿಶೀತ್ ರವರು ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಡಿ ಎಡ್ ಕಾಲೇಜ್ ನ ಉಪನ್ಯಾಸಕರಾದ ಮಂಜು ಯು ಆರ್, ರತ್ನ ಮಾನಸದ ಸಿಬ್ಬಂದಿಗಳಾದ ದೀಪಕ್ ಕೆ ,ಮಾಣಿಕ್ಯರಾಜ್, ಉದಯಕುಮಾರ್, ಮಹೇಂದ್ರ ರವರು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಶಿಕ್ಷಕರು ಪರಸ್ಪರ ಎದುರೆದುರು ಕುಳಿತುಕೊಂಡು ರಕ್ಷೆಯನ್ನು ಕಟ್ಟಿ ಸಿಹಿಯನ್ನು ಕೊಡುವುದರೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಾಯಿತು.

Related posts

ತ್ರೋಬಾಲ್ ಪಂದ್ಯಾಟ: ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ

Suddi Udaya

ಧರ್ಮಸ್ಥಳ ಪ್ರಕರಣ : ಸ್ವಾಮೀಜಿಗಳ ನಿಯೋಗದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಭೇಟಿ, ಎನ್ಐಎ ತನಿಖೆಗೆ ವಹಿಸುವಂತೆ ಮನವಿ

Suddi Udaya

ಬೆಳ್ತಂಗಡಿ: ಸರಕಾರಿ ಶಾಲೆಗಳ ನೂತನ ಕೊಠಡಿ ನಿರ್ಮಾಣಕ್ಕೆ ರೂ.1.715 ಕೋಟಿ ಅನುದಾನ ಮಂಜೂರು: ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ಪರಿಶಿಷ್ಟ ಜಾತಿ-ಪಂಗಡಗಳ ಕುಂದುಕೊರತೆಗಳ ಸಭೆ

Suddi Udaya

ಮಾಳಿಗೆ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಶಾಸಕರಿಂದ ಆಗಿದೆಯೇ; ಅಳದಂಗಡಿ ಜನಸ್ಪಂದನ ಸಭೆಯಲ್ಲಿ ಶಾಸಕರಿಗೆ ಗ್ರಾಮಸ್ಥರ ಪ್ರಶ್ನೆ

Suddi Udaya

ಬೆಳಾಲು ಶ್ರೀ ಧ. ಮಂ.ಅ. ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!