July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತೆಂಕಕಾರಂದೂರು: ಶ್ರೀರಾಗ ಸಂಗೀತ ಶಾಲೆ ಶುಭಾರಂಭ

ತೆಂಕಕಾರಂದೂರು: ವಾದ್ಯ, ನಾಟ್ಯ, ಭಜನೆಯಂತಹ ಯಾವುದೇ ಕಲೆಯು ಸಿದ್ಧಿಸಬೇಕಾದರೆ ಶಾಸ್ತ್ರೀಯ ಸಂಗೀತವೇ ಅಡಿಪಾಯ ಎಂದು ಭರತನಾಟ್ಯ ವಿದುಷಿ ಶ್ರೀಮತಿ ನಿಶಾಪ್ರಸಾದ್ ಹೇಳಿದರು.


ಅವರು ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀರಾಗ ಸಂಗೀತ ಶಾಲೆ ಉದ್ಘಾಟಿಸಿ ಮಾತನಾಡಿದರು. ಸಂಗೀತ ಮತ್ತು ಭರತನಾಟ್ಯಗಳೆರಡೂ ಒಂದೇ ಗಾಡಿಯ ಎರಡು ಚಕ್ರಗಳಿದ್ದಂತೆ. ಸಂಗೀತವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ರಾಗಬದ್ಧವಾಗಿ ಹಾಡುವುದರಿಂದ ಭಗವಂತನ ಸ್ತುತಿ ಮಾಡಿ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.


ಶ್ರೀಮತಿ ಉಮಾ ಶಂಕರನಾರಾಯಣ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಗ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ ಶ್ರೀಪ್ರಿಯಾ ಪರಕ್ಕಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪ್ರತಿ ಭಾನುವಾರ ಈ ತರಬೇತಿಯು ಮುಂದುವರೆಯುವುದಾಗಿ ತಿಳಿಸಿದರು.


ರವಿ ಪರಕ್ಕಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ನಡೆಯಿತು.

Related posts

ಶ್ಲೋಕ ಕಂಠಪಾಠ : ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ರಿಷಿಕ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಭೀಕರ ಮಳೆಗೆ ನಾವೂರು ಪೂವಪ್ಪ ಗೌಡ ರವರ ಮನೆಯ ಹಿಂಭಾಗ ಗುಡ್ಡ ಕುಸಿತ: ಅಪಾರ ಹಾನಿ

Suddi Udaya

ಬುಳೇರಿಮೊಗ್ರು ಪ್ರೌಢಶಾಲೆಗೆ ಸತತ 4ನೇ ವರ್ಷ ಶೇ.100 ಫಲಿತಾಂಶ

Suddi Udaya

ಕಲ್ಮಂಜ: ಕೃಷಿಕ ಶೀನ ಶೆಟ್ಟಿ ನಿಧನ

Suddi Udaya

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ಓರಿಯಂಟೇಷನ್ ಕಾರ್ಯಕ್ರಮ

Suddi Udaya

ಮುಂಡಾಜೆ ಬಂಟರ ಗ್ರಾಮ ಸಮಿತಿ  ಮಾಸಿಕ ಸಭೆ: ಎಸ್ ಎಸ್ ಎಲ್ ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

Suddi Udaya
error: Content is protected !!