22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವಾಯ್ಸ್ ಆಫ್ ಮಲ್ನಾಡ್ ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ ಬಂದಾರುವಿನ ಕುಸುಮ ಎಂ ಎಸ್

ಬೆಳ್ತಂಗಡಿ: ಎ.ಎಸ್.ಎನ್ ಕ್ರಿಯೇಷನ್ ಇವೆಂಟ್ ಮ್ಯಾನೇಜ್ಮೆಂಟ್ ಪ್ರೆಸೆಂಟ್ಸ್ ವಾಯ್ಸ್ ಆಫ್ ಮಲ್ನಾಡ್ ಮೂಡಿಗೆರೆ ಸೀಸನ್ 3 ರಲ್ಲಿ ಬಂದಾರು ಗ್ರಾಮದ ಬೈಪಾಡಿ ನೆರೋಲ್ದಪಳಿಕೆ ಹಳ್ಳಿ ಪ್ರತಿಭೆ ಕುಸುಮ ಎಂ ಎಸ್ ಫೈನಲ್ ಹಂತ ತಲುಪಿದ್ದಾರೆ.

ಅವಕಾಶ ಸಿಗುತ್ತಿಲ್ಲ ಎನ್ನುವವರ ಮಧ್ಯೆ, ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ಸದ್ದಿಲ್ಲದೇ ತಮ್ಮದೇ ಶೈಲಿಯಲ್ಲಿ ಗಾಯನ ಕ್ಷೇತ್ರದಲ್ಲಿ ಸುದ್ದಿ ಮಾಡುತ್ತಿರುವ ಹಳ್ಳಿ ಪ್ರತಿಭೆ ಕುಸುಮ ಎಂ ಎಸ್ ಇವರು ವಾಯ್ಸ್ ಆಫ್ ಮಲ್ನಾಡ್ ಇವರು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೆ ತಲುಪಿದ 12 ಸ್ಪರ್ಧೆಗಳಲ್ಲಿ ಇವರು ಒಬ್ಬರಾಗಿರುತ್ತಾರೆ.

ಯಾವುದೇ ಸಂಗೀತ ತರಬೇತಿ ಇಲ್ಲದೆ, ಸತತ ಅಭ್ಯಾಸದಿಂದ ಗಾಯನಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಸಣ್ಣ ಪುಟ್ಟ ಅವಕಾಶಗಳಲ್ಲಿ ಭಾಗವಹಿಸಿ, ತೆರೆ ಮರೆಯಲ್ಲಿದ್ದ ಪ್ರತಿಭೆಯೊಂದು ಜನರ ಮೆಚ್ಚುಗೆಗಳಿಸಿ ಸಂಗೀತಕ್ಷೇತ್ರದಲ್ಲಿ ಹೆಸರುಗಳಿಸುತ್ತಿದ್ದಾರೆ.

Related posts

ಎಕ್ಸೆಲ್ ನ ವಿದ್ಯಾರ್ಥಿಗಳಿಗೆ ಎ.ಎಂ.ಇ.ಸಿ.ಇ.ಟಿ ಯಲ್ಲಿ ರ್‍ಯಾಂಕ್

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದ ಪ್ರದಾನ ಸಮಾರಂಭ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ವರ್ಷದ ಸಂಭ್ರಮ

Suddi Udaya

ನೆರಿಯ : ಪೆಟ್ರೋನೆಟ್ ಪೈಪ್ ಲೈನ್ ನಿಂದ ಪೆಟ್ರೋಲ್ ಕಳ್ಳತನ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Suddi Udaya

ಮುಡಾ ಪ್ರಕರಣ ಬಿಜೆಪಿಯ‌ ಷಡ್ಯಂತರ, ಮುಖ್ಯಮಂತ್ರಿ ವಿರುದ್ಧ ಸೇಡಿನ ರಾಜಕೀಯವಷ್ಟೇ: ರಕ್ಷಿತ್ ಶಿವರಾಂ

Suddi Udaya
error: Content is protected !!