July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

ಮಂಗಳೂರು :ಕೇರಳದ ಕೊಟ್ಟಯಂ ಜಿಲ್ಲೆಯ ಪಾಲ ಸೆಂಟ್ ಅಲ್ಫೋನ್ಸಿಯನ್ ಸೆಂಟರ್ ನಲ್ಲಿ ನಡೆದ ಜಾಗತಿಕ ಸೀರೋ ಮಲಬಾರ್ ಧರ್ಮ ಸಭೆಯ ಐದನೇ ಜಾಗತಿಕ ಧರ್ಮ ಸಂಸದ್ ನಲ್ಲಿ ಸೀರೋ ಮಲಬಾರ್ ಧರ್ಮ ಸಭೆಯ ಸುಮಾರು ಐದು ಭೂಖಂಡಗಳ ಹದಿನಾರು ದೇಶಗಳ ಮೂವತ್ತಾಯಿದು ಧರ್ಮ ಪ್ರಾಂತ್ಯಗಳ ಆಯ್ದ 348 ಮಂದಿ ಪ್ರತಿನಿಧಿಗಳ ಸಮ್ಮೇಳನವು ಆ.22 ರಿಂದ ಆ 25 ರ ವರೆಗೆ ಅತ್ಯಂತ ಯಶಸ್ವಿಯಾಗಿ ಜರಗಿತು.


ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರ ಮತ್ತು ಪಶು ಸಂಗೋಪನಾ ಸಚಿವ ಜೋರ್ಜ್ ಕುರಿಯನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬೆಳ್ತಂಗಡಿ ಧರ್ಮ ಪ್ರಾಂತ್ಯದಿಂದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ, ವಿಕಾರ್ ಜೆನೆರಲ್ ಅತಿ ವಂದನಿಯ ಫಾ. ಜೋಸ್ ವಲಿಯಪರಂಭಿಲ್, ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನಿಯ ಫಾ. ಶಾಜಿ ಮಾತ್ಯು ಕ್ಯಾಥೋಲಿಕ್ ಯೂನಿಯನ್ ನಿಕಟ ಪೂರ್ವ ಅಧ್ಯಕ್ಷರು ಧರ್ಮ ಪ್ರಾಂತಿಯ ಪಾಲನ ಸಮಿತಿಯ ಸದಸ್ಯರು ಹಿರಿಯ ವಕೀಲರು ಸೇವಿಯಾರ್ ಪಾಲೇಲಿ, ಧರ್ಮ ಪ್ರಾಂತ್ಯ ದ ಕೇಂದ್ರ ಪಾಲನ ಸಮಿತಿಯ ಸದಸ್ಯರು ಎ ಕೆ ಸಿ ಸಿ ಜಾಗತಿಕ ಕಾರ್ಯದರ್ಶಿಗಳಲ್ಲಿ ಓರ್ವ ರಾದ ಜೈಸನ್ ಪಟ್ಟೀರಿ, ಮಾತೃ ವೇದಿಕೆ ಧರ್ಮ ಪ್ರಾಂತಿಯ ಅಧ್ಯಕ್ಷೆ ಶ್ರೀಮತಿ ಮೆರ್ಸಿ ಚಾಕೋ ಬಜಗೋಳಿ, ಮಡಂತ್ಯಾರು ಕಾಲೇಜಿನ ಪ್ರಾದ್ಯಪಕ ಅಲ್ವಿನ್ ಕೊಚ್ಚು ಪುರಕಲ್ ವೇಣೂರು ಭಾಗವಹಿಸಿದರು.


ಕಾರ್ಯಕ್ರಮವು ಸೀರೋ ಮಲಬಾರ್ ಸಭೆಯ ಭವಿಷ್ಯದ ಮಾರ್ಗದರ್ಶನಕ್ಕಾಗಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲು ವೇದಿಕೆ ಒದಗಿಸಿತು, ಮತ್ತು ಪ್ರತಿನಿಧಿಗಳಿಂದ ಅತ್ಯಧಿಕ ಸಹಕಾರವನ್ನು ಪಡೆದಿತು.

Related posts

ಉಜಿರೆ ಅನುಗ್ರಹ ಪ್ರೌಢಶಾಲೆಯಲ್ಲಿ ಅಗ್ನಿ ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಭಾಷಣ ಸ್ಪರ್ಧೆ

Suddi Udaya

ನೆರಿಯ: ಬಾಂಜಾರು ಶ್ರೀ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಶಿಲಾನ್ಯಾಸ

Suddi Udaya

ಬಿ.ಎಡ್. ಪರೀಕ್ಷೆ: ಉಜಿರೆ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ

Suddi Udaya

ಎಸ್.ಡಿ.ಎಂ ಝೇಂಕಾರ ಸೀಜನ್-6 ಉದ್ಘಾಟನೆ

Suddi Udaya

ತಾಲೂಕಿನ 5 ಕಡೆಗಳಲ್ಲಿ ಆಕಸ್ಮಿಕ ಬೆಂಕಿ ಅವಘಡ

Suddi Udaya
error: Content is protected !!