September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮರಕಡದಿಂದ -ಮಿಯಾರು ವರೆಗೆ ಹದಗೆಟ್ಟ ರಸ್ತೆ : ಕಳೆಂಜ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ: ಅಧಿಕಾರಿಗಳು ಬರಬೇಕೆಂದು ಗ್ರಾಮಸ್ಥರ ಒತ್ತಾಯ

ಕಳೆಂಜ: ಕಳೆಂಜ ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಕಳೆಂಜ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಗಿರಿಜ ರವರ ಅಧ್ಯಕ್ಷತೆಯಲ್ಲಿ ಆ.30 ರಂದು ಕಾಯರ್ತ್ತಡ್ಕ ದ.ಕಜಿ.ಪ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.

ಈ ವೇಳೆ ಮರಕಡದಿಂದ -ಮಿಯಾರು ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು ಪಿಡಬ್ಲ್ಯೂಡಿ ಅಧಿಕಾರಿಗಳ ಬರದ ಹಿನ್ನಲೆಯಲ್ಲಿ ರಿಕ್ಷಾ ಚಾಲಕರು ಮತ್ತು ಗ್ರಾಮಸ್ಥರು ಅವರು ಗ್ರಾಮಸಭೆಗೆ ಬರಲೇಬೇಕು ಎಂದು ಹಠ ಹಿಡಿದು ಬರದಿದ್ದರೆ ಅವರು ಬರುವ ದಿನ ಗ್ರಾಮಸಭೆ ಮುಂದುವರಿಸುವಂತೆ ಹೇಳಿ ಹೋರಟರು.

ಅಷ್ಟರಲ್ಲಿ ಗ್ರಾ.ಪಂ. ಸದಸ್ಯ ಹರೀಶ್ ಕೆ.ಬಿ ಶಾಸಕ ಹರೀಶ್ ಪೂಂಜರಿಗೆ ಕರೆ ಮಾಡಿ ತಿಳಿಸಿ ಅವರು ಒಂದು ವಾರದೊಳಗೆ ರಸ್ತೆ ಸರಿಪಡಿಸುವಂತೆ ಭರವಸೆ ನೀಡಿದಂತೆ ಗ್ರಾಮಸಭೆಯು ಮುಂದುವರಿಯಿತು.

ಒಂದು ವಾರದೊಳಗೆ ರಸ್ತೆ ಸರಿಪಡಿಸದಿದ್ದರೆ ಪ್ರತಿಭಟನೆ ಮಾಡುವುದು ಅದಕ್ಕೆ ಗ್ರಾ.ಪಂ. ಸಹಕಾರ ನೀಡಬೇಕೆಂದು ಗ್ರಾಮಸ್ಥರು ಹೇಳಿದರು.

Related posts

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಇಬ್ಬರು ಸೇರಿ ಜಿಲ್ಲೆಯ 11 ಮಂದಿ ಗಡಿಪಾರು

Suddi Udaya

ಎಕ್ಸೆಲ್ ಟೆಕ್ನೊ ಸ್ಕೂಲ್ ನ ಪೂರ್ವ ಪ್ರಾಥಮಿಕ ವಿಭಾಗದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಛದ್ಮವೇಷ ಸ್ಪರ್ಧೆ

Suddi Udaya

ಪೆರ್ಲ ಬೈಪಾಡಿ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಜಯಶ್ರೀ ಕೆ. ಸೇವಾ ನಿವೃತ್ತಿ

Suddi Udaya

ಕೊಕ್ಕಡ: ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಕಾಡು ಎಮ್ಮೆ: ಸವಾರರಿಗೆ ಗಾಯ

Suddi Udaya
error: Content is protected !!