ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಹರೀಶ್ ಪೂಂಜ

Suddi Udaya

Updated on:

ಧರ್ಮಸ್ಥಳ:ಗುರುಪೂರ್ಣಿಮೆಯ ಪುಣ್ಯ ದಿನದಂದು ಭಟ್ಕಳ ತಾಲೂಕಿನ ಕರಿಕಲ್ ಶ್ರೀ ರಾಮ ಧ್ಯಾನ ಮಂದಿರದಲ್ಲಿ ಆರಂಭವಾದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜರವರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.

ಈ‌ ಸಂದರ್ಭದಲ್ಲಿ ಶ್ರೀ ಶ್ರೀ ಮೆಹಾಂತ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಪಂಚದಶನಾಮ ಜುನಾಕಡದ ಅಂತರಾಷ್ಟ್ರೀಯ ಉಪಾಧ್ಯಕ್ಷ , ಶ್ರೀ ಶ್ರೀ ಮೇಹಾಂತ ದೇವಾನಂದ ಸರಸ್ವತಿ ಸ್ವಾಮೀಜಿ, ಪಂಚದಶನಾಮ ಜುನಾಕಡದ ನಿಕಟಪೂರ್ವ ಮಹಾಮಂತ್ರಿಗಳ ಅಧ್ಯಕ್ಷರು, ಶ್ರೀ ಶ್ರೀ ಶ್ರೀ ಮೆಹಾಂತ ಇಂದ್ರಾನಂದ ಸರಸ್ವತಿ ಸ್ವಾಮಿ ಮಹಾರಾಜ, ಶ್ರೀ ಶ್ರೀ ಕೇಶವ ಆನಂದ ಸ್ವಾಮೀಜಿ ಅಯೋಧ್ಯೆ, ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖಾ ಸಚಿವರಾದ ಮಾಂಕಳ್ ವೈದ್ಯ, ಮಿತ್ರರು ಮಾಜಿ ಶಾಸಕರಾದ ಸುನಿಲ್ ನಾಯಕ್, ಮಾಜಿ ಸಚಿವ ಮಲೀಕಯ್ಯ ಗುತ್ತೇದಾರ್ ಉಪಸ್ಥಿತರಿದ್ದರು.

Leave a Comment

error: Content is protected !!