24.7 C
ಪುತ್ತೂರು, ಬೆಳ್ತಂಗಡಿ
May 17, 2025
Uncategorized

ನಾವೂರು ತಡೆಗೋಡೆ ನಿರ್ಮಾಣನೀರು ನಿಂತು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ

ನಾವೂರು : ಇಲ್ಲಿಯ 6ನೇ ಮೈಲಿ ಕಲ್ಲಿನ ಬಳಿ ಗಂಪ, ನಾವೂರುಪಲ್ಕೆ, ಹೊಡಿಕ್ಕಾರ್, ಕಿರ್ನಡ್ಕ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಇದು ಖಾಸಗಿ ವ್ಯಕ್ತಿಗೆ ಸಂಬಂಧಪಟ್ಟ ಜಾಗ, ಆದರೆ ಇದರ ಬದಿಯಲ್ಲೇ ಮೇಲ್ಕಾಣಿಸಿದ ಹಲವಾರು ಮನೆಗಳಿಗೆ ಈ ದಾರಿಯ ಮುಖಾಂತರವೇ ಹಾದು ಹೋಗಬೇಕು ಆದರೆ ಎಫ್ಎಮ್‌ಬಿಯಲ್ಲಿ ಈ ಭಾಗಕ್ಕೆ ಹಾದು ಹೋಗುವ ಕಾಲುದಾರಿ ದಾಖಲೆ ಇದೆ,

ಆದರೆ ಈಗ ಈ ಜಾಗವನ್ನು ಖರೀದಿಸಿದ ವ್ಯಕ್ತಿ ತಡೆಗೋಡೆ ನಿರ್ಮಿಸಿರುತ್ತಾರೆ, ಆದರೆ ತಡೆಗೋಡೆ ನಿರ್ಮಿಸುವುದು ತಪ್ಪು ಎನ್ನುವುದು ಈ ಭಾಗದ ಜನರ ಅಭಿಪ್ರಾಯವಲ್ಲ, ಆದರೆ ತಡೆ ಗೋಡೆ ಮಾಡುವಾಗ ಸರಿಯಾದ ಮೋರಿಯನ್ನು ಹಾಕದೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪರಿಸರದ ಜನರಿಗೆ ಈಗ ಅಲ್ಲಿ ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆಯಾಗಿದೆ
( ಮೇಲ್ಕಾಣಿಸಿದ ಚಿತ್ರವನ್ನು ಸರಿಯಾಗಿ ಗಮನಿಸಿ )
ಈ ಸಮಸ್ಯೆಯನ್ನು ಜಾಗ ಖರೀದಿಸಿದ ವ್ಯಕ್ತಿಯ ಗಮನಕ್ಕೆ ತಂದಾಗ, ನಮ್ಮ ಬಗ್ಗೆ ಬೆಳ್ತಂಗಡಿ ಮತ್ತು ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,
ಅದಲ್ಲದೆ ನಮ್ಮ ಈ ಸಮಸ್ಯೆಯ ಬಗ್ಗೆ ಸುಮಾರು ಮೂರು ತಿಂಗಳ ಮೊದಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಿದ್ದು
ಅವರು ಯಾವುದೇ ಕ್ರಮ ಕೈಗೊಂಡಿಲ್ಲ . ಕೂಡಲೇ ಸಂಬಂದಿಸಿದವರು ನಮಗೆ ನಡೆದು ಕೊಂಡು ಹೋಗಲು ವ್ಯವಸ್ಥೆಗೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ,

  • ನೊಂದ ಪರಿಸರವಾಸಿಗಳು

Related posts

ಯಕ್ಷಭಾರತಿ ದಶಮಾನೋತ್ಸವ ಸಭಾ ಸಮಾರಂಭ ಮತ್ತು ಭಾರತ ಮಾತಾ ಪೂಜನ : ದಶಮಾನೋತ್ಸವ ಗೌರವ-ಯಕ್ಷಭಾರತಿ ಪ್ರಶಸ್ತಿ-ಸೇವಾ ಗೌರವ-ವಿದ್ಯಾರ್ಥಿ ವೇತನ ವಿತರಣೆ

Suddi Udaya

ಮೇ 26: ಕಾಯರ್ತಡ್ಕ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ, ಗೋನಂದಾರತಿ, ದೀಪೋತ್ಸವ

Suddi Udaya

ಧರ್ಮರಕ್ಷಾ ವೇದಿಕೆ ತೋಟತ್ತಾಡಿ ಆಶ್ರಯದಲ್ಲಿ ಎಂಟನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸೇವಾಭಾರತಿ ಆಶ್ರಯದಲ್ಲಿ 100ನೇ ಬೃಹತ್ ರಕ್ತದಾನ ಶಿಬಿರ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆ

Suddi Udaya

ತುಳುವಿಗೆ ಎರಡನೇ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ

Suddi Udaya
error: Content is protected !!