22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ನಾವೂರು ತಡೆಗೋಡೆ ನಿರ್ಮಾಣನೀರು ನಿಂತು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ

ನಾವೂರು : ಇಲ್ಲಿಯ 6ನೇ ಮೈಲಿ ಕಲ್ಲಿನ ಬಳಿ ಗಂಪ, ನಾವೂರುಪಲ್ಕೆ, ಹೊಡಿಕ್ಕಾರ್, ಕಿರ್ನಡ್ಕ ಈ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾಲು ದಾರಿ ಇದು ಖಾಸಗಿ ವ್ಯಕ್ತಿಗೆ ಸಂಬಂಧಪಟ್ಟ ಜಾಗ, ಆದರೆ ಇದರ ಬದಿಯಲ್ಲೇ ಮೇಲ್ಕಾಣಿಸಿದ ಹಲವಾರು ಮನೆಗಳಿಗೆ ಈ ದಾರಿಯ ಮುಖಾಂತರವೇ ಹಾದು ಹೋಗಬೇಕು ಆದರೆ ಎಫ್ಎಮ್‌ಬಿಯಲ್ಲಿ ಈ ಭಾಗಕ್ಕೆ ಹಾದು ಹೋಗುವ ಕಾಲುದಾರಿ ದಾಖಲೆ ಇದೆ,

ಆದರೆ ಈಗ ಈ ಜಾಗವನ್ನು ಖರೀದಿಸಿದ ವ್ಯಕ್ತಿ ತಡೆಗೋಡೆ ನಿರ್ಮಿಸಿರುತ್ತಾರೆ, ಆದರೆ ತಡೆಗೋಡೆ ನಿರ್ಮಿಸುವುದು ತಪ್ಪು ಎನ್ನುವುದು ಈ ಭಾಗದ ಜನರ ಅಭಿಪ್ರಾಯವಲ್ಲ, ಆದರೆ ತಡೆ ಗೋಡೆ ಮಾಡುವಾಗ ಸರಿಯಾದ ಮೋರಿಯನ್ನು ಹಾಕದೆ ನೀರು ನಿಂತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪರಿಸರದ ಜನರಿಗೆ ಈಗ ಅಲ್ಲಿ ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆಯಾಗಿದೆ
( ಮೇಲ್ಕಾಣಿಸಿದ ಚಿತ್ರವನ್ನು ಸರಿಯಾಗಿ ಗಮನಿಸಿ )
ಈ ಸಮಸ್ಯೆಯನ್ನು ಜಾಗ ಖರೀದಿಸಿದ ವ್ಯಕ್ತಿಯ ಗಮನಕ್ಕೆ ತಂದಾಗ, ನಮ್ಮ ಬಗ್ಗೆ ಬೆಳ್ತಂಗಡಿ ಮತ್ತು ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ,
ಅದಲ್ಲದೆ ನಮ್ಮ ಈ ಸಮಸ್ಯೆಯ ಬಗ್ಗೆ ಸುಮಾರು ಮೂರು ತಿಂಗಳ ಮೊದಲೇ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಿದ್ದು
ಅವರು ಯಾವುದೇ ಕ್ರಮ ಕೈಗೊಂಡಿಲ್ಲ . ಕೂಡಲೇ ಸಂಬಂದಿಸಿದವರು ನಮಗೆ ನಡೆದು ಕೊಂಡು ಹೋಗಲು ವ್ಯವಸ್ಥೆಗೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ,

  • ನೊಂದ ಪರಿಸರವಾಸಿಗಳು

Related posts

ಕಕ್ಕಿಂಜೆ ಕತ್ತರಿಗುಡ್ಡ ನಿವಾಸಿ ತೇಜಸ್ವಿ ನಿಧನ

Suddi Udaya

ನೆಲ್ಲಿಕಟ್ಟೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ನೂತನ ಅಧ್ಯಕ್ಷರಾಗಿ ಜನಾರ್ಧನ ಗೌಡ ಕುಳಾಯಿ ಕಾರ್ಯದರ್ಶಿಯಾಗಿ ಸುಂದರ್ ನಾಯ್ಕ್ ಕುಳಾಯಿ ಆಯ್ಕೆ

Suddi Udaya

ಮುಂಡಾಜೆ ಕ್ರೈಸ್ಟ್ ಅಕಾಡೆಮಿಯಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಬಸ್‌ ನಿಲ್ದಾಣದ ಬಳಿ ಅರಸಿನಮಕ್ಕಿಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯರ ಮೃತದೇಹ ಪತ್ತೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮದ ವೀಕ್ಷಣೆ

Suddi Udaya

ಮೊಗ್ರು : ನಾಳೆ (ಮಾ.23) ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.)ಅಲೆಕ್ಕಿ -ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ಮಕ್ಕಳ ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya
error: Content is protected !!