24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಬೆದ್ರಬೆಟ್ಟು ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

ಬೆದ್ರಬೆಟ್ಟು: ಸೆ. 20 ರಂದು ನಡೆದ ಬಂಗಾಡಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗ: ಕಥೆ ಹೇಳುವುದು ಆದ್ಯ ಮೂರನೇ ತರಗತಿ ದ್ವಿತೀಯ ಸ್ಥಾನ, ಧಾರ್ಮಿಕ ಪಠಣ ಅರೇಬಿಕ್ ಮೊಹಮ್ಮದ್ ಅಶಾಜ್4ನೇ ತರಗತಿ ದ್ವಿತೀಯ ಸ್ಥಾನ, ಛದ್ಮವೇಷ ಸಾನಿಕ 3ನೇ ತರಗತಿ ತೃತೀಯ ಸ್ಥಾನ . ಹಿರಿಯ ಪ್ರಾಥಮಿಕ ವಿಭಾಗ : ಕನ್ನಡ ಕಂಠಪಾಠ ಪ್ರತ್ಯುಶ 6ನೇ ತರಗತಿ ಪ್ರಥಮ ಸ್ಥಾನ, ಇಂಗ್ಲಿಷ್ ಕಂಠಪಾಠ ಕ್ಲೇಯರ್ ಸಜಿ 6ನೇ ತರಗತಿ ದ್ವಿತೀಯ ಸ್ಥಾನ, ಹಿಂದಿ ಕಂಠಪಾಠ ಫಾತಿಮತ್ ನುಸ್ರ ಏಳನೇ ತರಗತಿ ತೃತೀಯ ಸ್ಥಾನ, ಅಭಿನಯ ಗೀತೆ ಆತ್ಮಿಕ ಬಿ ಆರ್ 6ನೇ ತರಗತಿ ದ್ವಿತೀಯ ಸ್ಥಾನ, ಕಥೆ ಹೇಳುವುದು ಶಮಿತ್ 6ನೇ ತರಗತಿ ತೃತೀಯ ಸ್ಥಾನ, ಧಾರ್ಮಿಕ ಪಠಣ ಫಾತಿಮತ್ ಅಫ್ನ ಏಳನೇ ತರಗತಿ ದ್ವಿತೀಯ ಸ್ಥಾನ, ಕ್ಲೇ ಮಾಡಲಿಂಗ್ ಸನ್ವಿತ್ ಆರನೇ ತರಗತಿ ತೃತೀಯ ಸ್ಥಾನ , ಭಕ್ತಿ ಗೀತೆ ಸುಜನ್ ಕುಮಾರ್ 7ನೇ ತರಗತಿ ಪ್ರಥಮ ಸ್ಥಾನ, ಕವನ ವಾಚನ ಪ್ರೇಕ್ಷ ಕೆ ಎಲ್ 7ನೇ ತರಗತಿ ತೃತೀಯ ಸ್ಥಾನ. ಹೀಗೆ ಹಲವು ಬಹುಮಾನಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಶಾಲೆಯು ತನ್ನದಾಗಿಸಿಕೊಂಡು, ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರು, ಶಾಲಾ ಮುಖ್ಯ ಶಿಕ್ಷಕರು, ಹಾಗೂ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related posts

ಅಂತರ್ ಜಿಲ್ಲಾ ಮಹಿಳೆಯರ ವಾಲಿಬಾಲ್ ಪಂದ್ಯಾಟ : ಎಸ್.ಡಿ.ಎಂ ಕಾಲೇಜಿಗೆ ಪ್ರಶಸ್ತಿ

Suddi Udaya

ಕುತ್ಲೂರು ಸ.ಉ. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ

Suddi Udaya

ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ: ಹಂಸಿನಿ ಭಿಡೆಗೆ ದ್ವಿತೀಯ ಸ್ಥಾನ

Suddi Udaya

ನೆರಿಯ: ಕೋಲೋಡಿ ನಿವಾಸಿ ಜಯಂತ್ ಅಸೌಖ್ಯದಿಂದ ನಿಧನ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿಯಲ್ಲಿ ಅರಿಹಂತ್ ಜೈನ್ ಮಾಲೀಕತ್ವದ ಅಯಾನ್ಶ್ ಮೊಬೈಲ್ ಮಳಿಗೆ ನವೀಕರಣಗೊಂಡು ಶುಭಾರಂಭ

Suddi Udaya
error: Content is protected !!