23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕಿನ ಬೆದ್ರಬೆಟ್ಟು ರಿಫಾಯಿಯ್ಯಾ ಜುಮಾ ಮಸೀದಿ ಮತ್ತು ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪುಣ್ಯ ಪ್ರವಾದಿಯವರ ಜನ್ಮದಿನ ಅಂಗವಾಗಿ ‌ ಜಲ್ಸತುಲ್ ಜಮೀಲ್2024 ಪ್ರತಿಭಾ ಕಾರ್ಯಕ್ರಮ ಮಿಲಾದ್ ಆಚರಿಸಲಾಯಿತು. ಬೆದ್ರಬೆಟ್ಟು ಖತೀಬರಾದ ನೌಷಾದ್ ಸಖಾಫಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಮದ್ರಸ ವಿದ್ಯಾರ್ಥಿಗಳು ಮುಹಮ್ಮದ್ ಪೈಗಂಬ‌ರ್ (ಸ.ಅ )ರವರ ಚರಿತ್ರೆ, ಭಾಷಣ, ಮದಹ್ ಗೀತೆಗಳ ಮೂಲಕ ಈ ದಿನಕ್ಕೆ ಅರ್ಥ ಕಲ್ಪಿಸಿದರು. ಕಾರ್ಯಕ್ರಮದ ಕೊನೆಯ ಭಾಗವಾದ ಸಮಾರೋಪ ಸಮಾರಂಭ ವೇದಿಕೆಯನ್ನು ಬೆದ್ರಬೆಟ್ಟು ಆಡಳಿತ ಸಮಿತಿ ಅಧ್ಯಕ್ಷರಾದ ಸಲೀಂ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.


ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಜುಮಾ ಮಸೀದಿ ಕಿಲ್ಲೂರು ಖತೀಬ್ ಸಂಶೀರ್ ಸಖಾಫಿ ಪರಪ್ಪು ಉದ್ಘಾಟನೆ ಮಾಡಿದರು, ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ಝೈನುಲ್ ಅಬಿದೀನ್ ತಂಙಲ್ ಕಾಜೂರು ಪ್ರಾಸ್ತಾವಿಕ ಭಾಷಣ ಮಾಡಿ ದುಃಹಾ ನೆರವೇರಿಸಿದರು.


ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೇಂದ್ರ ಜುಮಾ ಪದಾಧಿಕಾರಿಗಳು, ಪಿಚಲರ್,ಪೆರ್ದಾಡಿ,ಏರ್ಮಲ,ಧರ್ಮ ಗುರುಗಳು ಹಾಗು ಪದಾಧಿಕಾರಿಗಳು, ಬೆದ್ರಬೆಟ್ಟು ಮಸೀದಿ ಮಾಜಿ ಅಧ್ಯಕ್ಷರು ಹಸೈನಾರ್, ಮುರ್ಷೀದುಲ್ ಆನಾಮ್ ಯಂಗ್ ಮ್ಯಾನ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಉದ್ಯಮಿ ಸತ್ತಾರ್ ಬಂಗಾಡಿ, ವಜೀರ್ ಬಂಗಾಡಿ, ಎಸ್.ಎಸ್.ಎಫ್ ಅಧ್ಯಕ್ಷರಾದ ನೌಫಲ್ ಹಾಶಿಮಿ , ಎಸ್.ವೈ.ಎಸ್ ಅಧ್ಯಕ್ಷರಾದ ಮಜೀದ್ ಗೋಲ್ಡನ್ ಫಿಶ್ ಮತ್ತು ಅಝರ್ ಮಿಸ್ಬಾಹಿ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಸಿನಾನ್ ಸಅದಿ ಸ್ವಾಗತಿಸಿ ಅಬ್ದುಲ್ ಖಾದರ್ ಸಅದಿ ನಿರೂಪಿಸಿದರು. ಮಧ್ಯಾಹ್ನ ಸಾಮೂಹಿಕ ಮಿಲಾದ್ ವಿಶೇಷ ಪ್ರಾರ್ಥನೆ ಸಾರ್ವಜನಿಕ ತುಪ್ಪದೂಟ ಮತ್ತು ಕಾರ್ಯಕ್ರಮ ಕೊನೆಯಲ್ಲಿ ತಬರ್ರುಕ್ ವಿತರಣೆ ಮಾಡಲಾಯಿತು

Related posts

ಗಾಳಿ ಮಳೆ: ಕಳಿಯ-ನ್ಯಾಯತರ್ಪು ವ್ಯಾಪಕ ಹಾನಿ15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

Suddi Udaya

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ : ರೂ.144ಕೋಟಿ ವ್ಯವಹಾರ, ಸದಸ್ಯರಿಗೆ ಶೇ.11 ಡಿವಿಡೆಂಟ್

Suddi Udaya

ಮಾಲಾಡಿ: ಕೊಲ್ಪದಬೈಲುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಕಾರು

Suddi Udaya

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

Suddi Udaya

ದಲಿತ ಮುಖಂಡ ಚಂದು ಎಲ್ ರವರ ಪ್ರಥಮ ವರ್ಷದ ಪುಣ್ಯ ಸ್ಮರಣಾ ಕಾರ್ಯಕ್ರಮ

Suddi Udaya

ಮಾಲಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya
error: Content is protected !!