April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

ನೆರಿಯ: ಗಂಡಿಬಾಗಿಲು ಸಂತ ಥೋಮಸ್ ದೇವಾಲಯದಲ್ಲಿ, ಹಿರಿಯ ಸಮಾಜಸೇವಕರಾದ ಮತ್ತು ವಿವಿಧ ಸಂಘ-ಸಂಸ್ಥೆಗಳ ಸದಸ್ಯರಾಗಿರುವ ಚಾಂಡಿ ಅವರನ್ನು, ವೇದಿಕೆಯ ಹಿಂದೆ ಹಲವಾರು ಜನಾನುರಾಗಿ ಕಾರ್ಯಕ್ರಮಗಳ ಮೂಲಕ, ನೆರಿಯ-ಗಂಡಿಬಾಗಿಲು ಪ್ರದೇಶದಲ್ಲಿ ಮನೆ ಮಾತಾಗಿರುವ ಕಾರಣಕ್ಕಾಗಿ, ವಿನ್ಸೆಂಟ್ ಡಿ ಪೌಲ್ ದಿನದಂದು ಸನ್ಮಾನಿಸಲಾಯಿತು.

ಸಮಾಜ ಸೇವೆ ಮತ್ತು ಬಡವರ ಏಳಿಗೆಗಾಗಿ ಅವರು ನೀಡಿದ ಅನೇಕ ಸೇವೆಗಳನ್ನು, ಸ್ಥಳೀಯ ವಿನ್ಸೆಂಟ್ ಸೊಸೈಟಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ದಕ್ಷಿಣ ಕನ್ನಡ ಗ್ರಾಮೀಣಾಭಿವೃದ್ಧಿ ಸೊಸೈಟಿ (DKRDS), ಮತ್ತು ದೀರ್ಘಾವಧಿ ಕ್ರೆಡಿಟ್ ಯೂನಿಯನ್, ಗಂಡಿಬಾಗಿಲು ಇದರ ಅಧ್ಯಕ್ಷರಾಗಿ, ಚರ್ಚ್ ಪಾಲನಾ ಸಮಿತಿ ಸದಸ್ಯರಾಗಿ, ಟ್ರಸ್ಟಿಯಾಗಿಯೂ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಕೊಡುಗೆಗಳನ್ನು ಗೌರವಿಸಲಾಯಿತು.

ಚರ್ಚ್ ನ ಧರ್ಮ ಗುರು ವಂ. ಫಾ ಜೋಸ್, ಟ್ರಸ್ಟಿಗಳಾದ ಶಾಜಿ ಮಣ್ಣಿಯೇಕುಂನೆಲ್, ಶಿಜೋ ಕುರಿಯನ್ ಸೇಬಾಸ್ತಿಯನ್ ಎಂ ಜೆ ಮೊದಲಾದವರು ಉಪಸ್ಥಿತರಿದ್ದರು. ಸಂಡೆ ಸ್ಕೂಲ್ ಮುಖ್ಯೋಪಾಧ್ಯಾಯ ಶಿಜು ಸಿ ವಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಶಿಶಿಲ: ತಾಯಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಶ್ರೀ ಮತ್ಸ್ಯ ಶಿವ ದುರ್ಗಾ ಮಹಿಳಾ ಭಜನಾ ಮಂಡಳಿಯಿಂದ ಸರಕಾರಕ್ಕೆ ಮನವಿ

Suddi Udaya

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ನಾರ್ತ್ ಕೆರೊಲಿನಾ ದಂತ ವೈದ್ಯಕೀಯ ವಿದ್ಯಾರ್ಥಿ ತಂಡ ಭೇಟಿ

Suddi Udaya

ಜಡಿಮಳೆ: ಉರುಳಿ ಬಿದ್ದ ಸಂಗಮ ಕ್ಷೇತ್ರ ಕಲ್ಮಂಜ ಶ್ರೀ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ಪುರಾತನ ಕಾಲದ ಅಶ್ವತ್ಥ ಮರ

Suddi Udaya

ಮುಂಡಾಜೆ ಶ್ರೀ ಸನ್ಯಾ ಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya
error: Content is protected !!