July 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ ಗ್ರಾ.ಪಂ. ನಿಂದ ವಿಕಲಚೇತನ ವ್ಯಕ್ತಿಗೆ ತಕ್ಷಣ ಸ್ಪಂದನೆ

ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹೊಸಖಂಡ ಎಂಬಲ್ಲಿನ ವಿಕಲಚೇತನ ಫಲಾನುಭವಿಯಾದ ಪಕೀರ ಮುಗೇರಾ ಇವರ ಮಾಸಿಕ ಪೋಷಣಾಭತ್ಯೆಯು ಆಧಾರ್ ಚೀಟಿಯ ತಾಂತ್ರಿಕ ದೋಷದಿಂದ 2 ತಿಂಗಳಿಂದ ಸ್ಥಗಿತ ವಾಗಿರುದನ್ನು ತಿಳಿದುಕೊಂಡ ಉಜಿರೆ ಪಂಚಾಯತ್ ನ ಗ್ರಾಮೀಣ ವಿಆರ್.ಡಬ್ಲ್ಯೂ ಆದಂತಹ ವಿಪುಲ್ ಪೂಜಾರಿ ಇವರು ಸಂಬಂಧಿಸಿದ ಪಲಾನುಭವಿಯ ಆಧಾರ್ ಚೀಟಿಯ ತಾಂತ್ರಿಕ ದೋಷವನ್ನು ಸರಿಪಡಿಸಲು ಸಹಾಯ ಮಾಡುವಂತೆ ಕೋರಲು ಮನವಿ ಪತ್ರ ನೀಡಲು ಸೆ.30 ರಂದು ಸೂಚಿಸಿದ ಹಿನ್ನಲೆಯಿಂದ ಅ. 01 ರಂದು ಪಲಾನುಭವಿಯ ಬೇಡಿಕೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹಾಗೂ ಪಂಚಾಯತ್ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರದೊಂದಿಗೆ ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಯಾದ ಭವಾನಿ ಶಂಕರ್ ಇವರ ಮೆಚ್ಚುಗೆಯೊಂದಿಗೆ ತಾಲೂಕು ವಿಕಲಚೇತನರ ಮೇಲ್ವಿಚಾರಕರಾದ ಜೋನ್ ಭ್ಯಾಪ್ಟಿಸ್ಟ್ ಇವರ ಸಲಹೆ ಸೂಚನೆಯಂತೆ ಜಿಲ್ಲಾಧಿಕಾರಿಯವರ ಕಛೇರಿಯ ಆಧಾರ್ ಕೇಂದ್ರಕ್ಕೆ ಫಲಾನುಭವಿಯವರನ್ನು ಕರೆ ತಂದು ಪಕೀರಾ ಮುಗೇರಾ ಇವರ ಆಧಾರ್ ನ್ನು ಸರಿಪಡಿಸಲಾಯಿತು.

ಈ ಸಂದರ್ಭದಲ್ಲಿ ಚಿರಂಜೀವಿ, ಗ್ರಾಮೀಣ ವಿ.ಆರ್.ಡಬ್ಲ್ಯೂ, ಗ್ರಾಮ ಪಂಚಾಯತ್, ಕಣಿಯೂರು ಇವರು ಕೂಡ ಜೊತೆಗಿದ್ದು ಸಹಕರಿಸಿದರು.

Related posts

ಶ್ರೀ.ಧ.ಮಂ.ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪೂರೈಸಿದ 114 ಮಂದಿಗೆ ಪದವಿ ಪ್ರದಾನ:

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಕಾಯರ್ತಡ್ಕದ ಅಂಬಿಕಾ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಿ.ಎಂ ಸಿದ್ದರಾಮಯ್ಯ ಹಾಗೂ ಡಿ.ಸಿ.ಎಂ ಡಿ.ಕೆ ಶಿವಕುಮಾರ್ ಭೇಟಿ: ದೇವರಿಗೆ ವಿಶೇಷ ಪೂಜೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ನಾಟ್ಯಾಭ್ಯಾಸ ತರಬೇತಿ

Suddi Udaya

ಪುದುವೆಟ್ಟು: ಅಡ್ಯಾದಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್, ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್, ರೂ10 ಸಾವಿರಕ್ಕಿಂತ ಹೆಚ್ಚಿನ ಖರೀದಿಗೆ ಶೇ 20 ರಿಯಾಯಿತಿ ಹಾಗೂ ವಿಶೇಷ ಉಡುಗೊರೆ

Suddi Udaya
error: Content is protected !!