ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

ಉಜಿರೆ : ಗಾಂಧೀಜಿಯವರ ತತ್ವಗಳು ನಶಿಸಿ ಹೋಗಿವೆ ಆದರೆ ಅವರ ಕೆಲವು ತತ್ವಗಳು ಇವತ್ತಿಗೂ ಪಾಲಿಸುತ್ತಾರೆ ಸತ್ಯವನ್ನು ಹೇಳಬೇಕು ,ಸರಳವಾಗಿರಬೇಕು, ನಮ್ಮ ಕೆಲಸವನ್ನು ನಾವೇ ಮಾಡಬೇಕು ಒಂದು ಕೆನ್ನೆಗೆ ಒಡೆದಾಗ ಇನ್ನೊಂದು ಕೆನ್ನೆ ತೋರಿಸಬೇಕು ಎಂದು ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ತಿಳಿಸಿದರು.


ಅವರು ಅ. 2 ರಂದು ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿಧ್ಯಾರ್ಥಿನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ನಡೆದ ಗಾಂಧೀಜಿಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಮಾಡಿ ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ರತ್ನಮಾನಸ ವಸತಿ ನಿಲಯದ ಪಾಲಕರಾದ ಯತೀಶ್ ಕೆ ಬಳಂಜರವರು ಮಾತನಾಡಿ ಕೆಲವನ್ನು ನೋಡುವುದರ ಮೂಲಕ ಕಲಿಯಬೇಕು ಕೆಲವನ್ನು ಮಾಡುವುದರ ಮೂಲಕ ಕಲಿಯಬೇಕು. ಮಾರ್ಕ್ಸ್ ಗಿಂತ ರಿಮಾರ್ಕ್ ಇಲ್ಲದೆ ಬದುಕುವುದು ಉತ್ತಮ.
ಇತ್ತಿಚೀನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ದ ಜೊತೆಗೆ ಜೀವನ ಶಿಕ್ಷಣ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ರೆಸಿಡೆನ್ಸಿಯಲ್ ಕಾಲೇಜಿನ ಪಾಂಶುಪಾಲರಾದ ಸುನಿಲ್ ಪಂಡಿತ್ ಸ್ವಾಗತಿಸಿ ರತ್ನಮಾನಸದ ಅದ್ಯಪಕರಾದ ರವಿಚಂದ್ರರವರು ಧನ್ಯವಾದ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಪಾಲಕಾರದ ವಿಶ್ವನಾಥ ಹಾಗೂ ಶಿಕ್ಷಕರಾದ ಅಕಿಲ್ ,ರೋಷನ್ ,ಉಮೇಶ್ ಮತ್ತು ರತ್ನಮಾನಸ ದ ಶಿಕ್ಷಕರಾದ ಉದಯರಾಜ್ ,ದೀಪಕ್ ಕೆ ಉಪಸ್ಥಿತರಿದ್ದರು.

Related posts

ನ.20: ಚಾರ್ಮಾಡಿಯಲ್ಲಿ ಸಹಕಾರ ಸಪ್ತಾಹ ಸಮಾರೋಪ

Suddi Udaya

ರಕ್ತೇಶ್ವರಿಪದವು ಶಾಲಾ ಹಳೆ ವಿದ್ಯಾರ್ಥಿಗಳಿಂದ ಹದಗೆಟ್ಟ ರಸ್ತೆ ದುರಸ್ತಿ ಶ್ರಮದಾನ

Suddi Udaya

ವೇಣೂರು ಹಿದಾಯಾತುಲ್ ಇಸ್ಲಾಂ ಮದ್ರಸದ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

Suddi Udaya

ಧರ್ಮಸ್ಥಳ – ಮಂಗಳೂರು ತುಳುನಾಡು ಸಾರಿಗೆ ಬಸ್

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳನ್ನು ಕರೆ ತಂದು ಮಹಜರು

Suddi Udaya

ಕೆಪಿಎಸ್ ಪುಂಜಾಲಕಟ್ಟೆ ಪ್ರೌಢಶಾಲೆ ಮತ್ತು ಪದವಿಪೂರ್ವ ವಿಭಾಗದ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya
error: Content is protected !!