22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ (71 ವ) ರವರು ಅ.2ರಂದು ಮಧ್ಯಾಹ್ನ 12.00 ಗಂಟೆಗೆ ಗೇರುಕಟ್ಟೆ ಕೆನರಾ ಬ್ಯಾಂಕಿನ ATM ಕೇಂದ್ರದಲ್ಲಿ ಹಣ ಡ್ರಾ ಮಾಡುತಿದ್ದಾಗ ATM ಕೇಂದ್ರಕ್ಕೆ ಒಳ ಪ್ರವೇಶಿಸಿದ ಅಪರಿಚಿತ ಇಬ್ಬರು ವ್ಯಕ್ತಿಗಳು ಹಿಂದಿಯಲ್ಲಿ ಮಾತನ್ನಾಡಿ ಸಹಾಯಕ್ಕೆ ಬಂದಿದ್ದು, ಪಿರ್ಯಾದುದಾರರು ಸಹಾಯದ ಅಗತ್ಯ ಇಲ್ಲವೆಂದು ತಿಳಿಸಿದರೂ, ಅಪರಿಚಿತರು ಒಳಗಡೆಯೇ ನಿಂತಿದ್ದು, ನಂತರ ಪಿರ್ಯಾದುದಾರರು ಹಣ ತೆಗೆದು ATM ಕೇಂದ್ರದಿಂದ ATM ಕಾರ್ಡ್ ನೊಂದಿಗೆ ಹೊರಗಡೆ ಹೋಗಿದ್ದು, ನಂತರ ಅ.4ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡಲು ATM ಕೇಂದ್ರಕ್ಕೆ ಹೋದಾಗ, ಕಾರ್ಡ್ ರೀಡ್ ಆಗದೇ ಇದ್ದು, ನಂತರ ಪಿರ್ಯಾದುದಾರರು ಬ್ಯಾಂಕ್ ಗೆ ಹೋಗಿ ವಿಚಾರಿಸಲಾಗಿ ATM ಕಾರ್ಡ್ ಬದಲಾದ ಬಗ್ಗೆ ತಿಳಿಸಿದ್ದು, ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲಾಗಿ ಖಾತೆಯಲ್ಲಿದ್ದ ರೂ. 49,200/- ಹಣವನ್ನು ವಂಚಿಸಿ ತನ್ನ ATM ಕಾರ್ಡ್ ಬಳಸಿ, ಆ ದಿನ ATM ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ATM ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅ.9ರಂದು ನೀಡಿದ ದೂರಿನ ಆಧಾರದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ : 86/2024, ಕಲಂ: 316(2), 318(4) BNS – 2023 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. 08256 – 232093

Related posts

ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನಲ್ಲಿ ಜಿಎಸ್‌ಟಿ ದಿನಾಚರಣೆ

Suddi Udaya

ಸ್ಟಾರ್ ವುಮನ್ ಪ್ರಶಸ್ತಿಗೆ ಬೆಳ್ತಂಗಡಿಯ ಫೌಝಿಯಾ ಆಯ್ಕೆ

Suddi Udaya

ಎಸ್.ಐ‌.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಬೆಳ್ತಂಗಡಿ ಕಚೇರಿಗೆ ಆಗಮನ

Suddi Udaya

ಉಜಿರೆ ದೇವಸ್ಥಾನದಲ್ಲಿ ಸಂಕಷ್ಟ ಚತುರ್ಥಿ ಪ್ರಯುಕ್ತ  ಕಾವ್ಯವಾಚನ-ವ್ಯಾಖ್ಯಾನ   

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಪೊಲೀಯೋ ಲಸಿಕಾ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ

Suddi Udaya

ಮುಂಡಾಜೆ : ಬಂಡಿಮಠ ನಿವಾಸಿ ಪುರಲ್ಲ ನಿಧನ

Suddi Udaya
error: Content is protected !!