22.6 C
ಪುತ್ತೂರು, ಬೆಳ್ತಂಗಡಿ
July 23, 2026
Uncategorized

ಕಲ್ಲೇರಿ ವಿನಾಯಕ ನಗರದಲ್ಲಿ ಐಸಿರಿ ಮಹಿಳಾ ಮಂಡಳಿಯ ಉದ್ಘಾಟನೆ

ಕಲ್ಲೇರಿ :ಕರಾಯ ಗ್ರಾಮದ ಕಲ್ಲೇರಿಯ ವಿನಾಯಕ ನಗರದಲ್ಲಿ ‘ಐಸಿರಿ’ ಮಹಿಳಾ ಮಂಡಳಿಯ ಉದ್ಘಾಟನೆ ಅ 20ರಂದು ನಡೆಯಿತು…

ತಣ್ಣೀರುಪಂಥ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮಾವತಿ, ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು..
ಸಂಪನ್ಮೂಲ ವ್ಯಕ್ತಿಯಾಗಿ ಉಷಾ ನಾಯಕ್ ಇವರು ಮಂಡಳಿಯ ರೂಪು ರೇಷೆ, ಸದಸ್ಯರ ಜವಾಬ್ದಾರಿ, ಮಂಡಳಿಯ ಆರ್ಥಿಕ ಸಭಲೀಕರಣದ ಕುರಿತು ಮಾತನಾಡಿ ಶುಭ ಹಾರೈಸಿದರು..

ವೇದಿಕೆಯಲ್ಲಿ ಮಂಡಳಿಯ ಗೌರವ ಅಧ್ಯಕ್ಷರಾದ ಶ್ರೀಮತಿ. ನೀಲಮ್ಮ ಧರ್ಣಪ್ಪ ಗೌಡ ನೇತ್ರವತಿ, ಮಂಡಳಿಯ ಅಧ್ಯಕರಾದ ಶ್ರೀಮತಿ. ದೀಕ್ಷಿತಾ ರವಿ, ಗೌರವ ಉಪಸ್ಥಿತರಾಗಿ ಶ್ರೀ. ಸಾಮ್ರಾಟ್ ಕರ್ಕೇರ, ಸದಸ್ಯರು ಗ್ರಾಮ ಪಂಚಾಯತ್ ತಣ್ಣೀರುಪಂಥ ಹಾಗೂ ಅಧ್ಯಕ್ಷರು ಗಣೇಶೋತ್ಸವ ಸಮಿತಿ, ಶ್ರೀ ಉಮೇಶ್ ಸಾಲ್ಯಾನ್, ಕಾರ್ಯದರ್ಶಿ ಗಣೇಶೋತ್ಸವ ಸಮಿತಿ, ಪ್ರಭಾಕರ ಪೊಸಂದೋಡಿ ಸಂಚಾಲಕರು ಗಣೇಶೋತ್ಸವ ಸಮಿತಿ ಉಪಸ್ಥಿತರಿದ್ದರು..

ಶ್ರೀಮತಿ. ಪ್ರೇಮ ದೇವರಮಾರು ಪ್ರಾರ್ಥಿಸಿ, ಶ್ರೀಮತಿ. ಪ್ರಿಯ ಲಕ್ಷ್ಮಣ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ. ನಳಿನಿ ರೈ ಧನ್ಯವಾದನಿತ್ತು, ಮಂಡಳಿಯ ಕಾರ್ಯದರ್ಶಿ ಶ್ರೀಮತಿ. ಚಂಚಲಾಕ್ಷಿ ಹರೀಶ್ ಖಂಡಿಗ ಕಾರ್ಯಕ್ರಮ ನಿರೂಪಿಸಿದರು

Related posts

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya

ಉಡುಪಿಯ ಪೇಜಾವರ ಮಠಾಧೀಶರು ಪವಿತ್ರ ಕ್ಷೇತ್ರವಾದ ಶ್ರೀ ಮಧ್ವ ಮಂಟಪಕ್ಕೆ ಭೇಟಿ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವರನ್ನು ಗಡಿಪಾರು ಮಾಡಲು ಪೊಲೀಸ್‌ ಇಲಾಖೆ ಸಿದ್ದತೆ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಉಜಿರೆ: ಬೈಕ್ ಡಿವೈಡರ್ ಗೆ ಡಿಕ್ಕಿ, ಸವಾರ ಕಾಲೇಜು ವಿದ್ಯಾರ್ಥಿ ಗಂಭೀರ

Suddi Udaya

ಕೊಯ್ಯೂರು ದೆಂತ್ಯಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ, ಗರ್ಭನ್ಯಾಸ

Suddi Udaya
error: Content is protected !!