September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಾನರ್ಪ ಕೋಡಿಯಾಲ್ ಬೈಲ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಕಾನರ್ಪ ಪ್ರೀಮಿಯರ್ ಲೀಗ್ – 2024 ಕ್ರಿಕೇಟ್ ಪಂದ್ಯಾಟ

ಕಡಿರುದ್ಯಾವರ: ಕಾನರ್ಪ ಕೋಡಿಯಾಲ್ ಬೈಲ್ ಶಾಲಾ ಮೈದಾನದಲ್ಲಿ ಗ್ರಾಮದ ಯುವಕರ ಒಗ್ಗೂಡುವಿಕೆಯಲ್ಲಿ ಕಾನರ್ಪ ಪ್ರೀಮಿಯರ್ ಲೀಗ್-2024 ಕ್ರಿಕೇಟ್ ಪಂದ್ಯಾಟವು ನಡೆಯಿತು.


ಈ ಪಂದ್ಯಾಟದ ಉದ್ಘಾಟನೆಯನ್ನು ಹಿರಿಯ ಸದಸ್ಯರಾದ ಉಮೇಶ್ ಪ್ರಗತಿ ನೆರೆವೇರಿಸಿದರು.
ಈ ಸಂದರ್ಭ ಕ್ರೀಡೋತ್ಸವದ ಸಂಚಾಲಕರಾದ ಆದರ್ಶ ಉದ್ದದಪಲಿಕೆ, ಬಾಲಕೃಷ್ಣ ಉದ್ದದಪಲಿಕೆ, ನವೀನ್ ಕಾನರ್ಪ, ರಾಮಚಂದ್ರ ಕಾನರ್ಪ, ಜನಾರ್ಧನ ಕಾನರ್ಪ, ರಾಮಚಂದ್ರ ಹೇಡ್ಯ ಉಪಸ್ಥಿತರಿದ್ದರು.
8 ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವು. ಕ್ರೀಡಾಳುಗಳಿಗೆ ಹಾಗೂ ನೆರೆದ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಚಂದ್ರಕಾಂತ ಕನಪ್ಪಾಡಿ, ದ್ವಿತೀಯ ಹನೀಫ್, ತೃತೀಯ ವಿನ್ಯಾಸ್ ಹಾಗೂ ಚತುರ್ಥ ಶ್ರೇಯಸ್ ತಂಡ ಬಹುಮಾನ ಪಡೆದುಕೊಂಡರು.


ಈ ಸಂಧರ್ಭ ಉಜಿರೆ ದಿಶಾನ್ ಹೋಟೆಲ್ ಮಾಲಕರಾದ ದಿನೇಶ್ ಪೂಜಾರಿ ಕಾನರ್ಪ, ಭಾರತೀಯ ಭೂ ಸೇನೆ ಯೋಧರಾದ ಕಮಲಾಕ್ಷ ಗೌಡ ಕಾನರ್ಪ, ಚೆನ್ನಕೇಶವ ಕಾನರ್ಪ, ಕಮಲಾಕ್ಷ ಕೋಡಿ, ಶೀನಪ್ಪ ಗೌಡ ಕನಪ್ಪಾಡಿ, ಚಂದ್ರಕಾಂತ ಗೌಡ ಬೆಟ್ಟು, ಉಮೇಶ್ ಕೌಡಂಗೆ, ರಾಜೇಶ್ ಕೆ. ಉಪಸ್ಥಿತರಿದ್ದರು.

Related posts

ಭಾರೀ ಮಳೆಗೆ : ಕೊಕ್ಕಡ ಎಲ್ಯಣ್ಣ ಗೌಡರವರ ಬಾವಿ ಕುಸಿತ: ಅಪಾರ ನಷ್ಟ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಧಾರ್ಮಿಕ ಸಭೆ

Suddi Udaya

ಆ 31: ಬೆಳ್ತಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಗುರುಜಯಂತಿ: ಸಮಾಜದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ

Suddi Udaya

ಗೇರುಕಟ್ಟೆ: ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

12 ವರ್ಷಗಳ ಮೋದಿ ನೇತೃತ್ವ – ಹೊಸ ಭಾರತದ ಆತ್ಮವಿಶ್ವಾಸದ ಪಯಣ: ಅನಿಲ್ ಕುಮಾರ್ ಯು

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಶುಭ ಶುಕ್ರವಾರ ಆಚರಣೆ

Suddi Udaya
error: Content is protected !!