July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆ ಶುಭಾರಂಭ: ಆರ್ಥಿಕ ವರ್ಷದಲ್ಲಿ 350 ಕೋಟಿ ವಹಿವಾಟನ್ನು ತಲುಪುವ ಗುರಿ: ಅಮೋಘ ಜೆ.ರೈ

ಬೆಳ್ತಂಗಡಿ:1994ರಲ್ಲಿ ಪ್ರಾರಂಭಗೊಂಡ ಪ್ರವೀಣ್ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್ ನ 13ನೇ ಶಾಖೆಯು ಬೆಳ್ತಂಗಡಿಯ ಹನುಮಾನ್ ಕಾಂಪ್ಲೆಕ್ಸ್, ಬಾಳಿಗ ಕಟ್ಟಡದ ಒಂದನೇ ಮಹಡಿಯಲ್ಲಿ ನ.8 ರಂದು ಉದ್ಘಾಟನೆಗೊಂಡಿತು.

ಸಂಸ್ಥೆಯ ಉದ್ಘಾಟನೆಯನ್ನು ಶಾರದಾ ಟ್ರೇಡರ್ಸ್ ಮಾಲಿಕ ರಮೇಶ್ ಭಟ್ ನೇರವೇರಿಸಿ ಶುಭ ಕೋರಿದರು.

ಸಿಇಒ ಅಮೋಘ ಜೆ.ರೈ ದೀಪ ಬೆಳಗಿಸಿ ಮಾತನಾಡಿ ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಹಣಕಾಸು ಕ್ಷೇತ್ರದಲ್ಲಿ 30 ವರ್ಷಗಳ ಅನುಭವದೊಂದಿಗೆ ಕರ್ನಾಟಕ ರಾಜ್ಯದ 15 ಜಿಲ್ಲೆಗಳಲ್ಲಿ ಗ್ರಾಹಕರನ್ನು ಹೊಂದಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಡಿಜಿಎಮ್ ಶ್ರೀವತ್ಸರಾಜ್, ರಿಜಿನಲ್ ಮ್ಯಾನೇಜರ್ ಉದಯ್ ಶ್ಯಾಮ್, ಬ್ರಾಂಚ್ ಮ್ಯಾನೇಜರ್ ಪ್ರದೀಪ್ ಬಂಗೇರ, ಚಾರ್ಟೆಡ್ ಅಕೌಂಟೆಂಟ್ ಹೇಮಂತ್ ಪೈ, ಬೆಳ್ತಂಗಡಿ ಹನುಮಾನ್ ಕಾಂಪ್ಲೆಕ್ಸ್ ಮಾಲಕ ಯಶವಂತ ಬಾಳಿಗ,
ತಾ.ಪಂ ಮಾಜಿ ಸದಸ್ಯರು ಶಶಿಧರ ಕಲ್ಮಂಜ,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀ‌ನ್ ನೆರಿಯ,ವಕೀಲ ಪ್ರಶಾಂತ್, ಸ್ಪಂದನ ಲ್ಯಾಬೋರೇಟರಿ ಮುಖ್ಯಸ್ಥ ಮೆಲ್ಬಿ, ಪುತ್ತೂರು ಬ್ರಾಂಚ್ ಮ್ಯಾನೇಜರ್ ಶಿವ ಕುಮಾರ್, ಸಂಜೀವ ಎ ಬೆಳ್ತಂಗಡಿ, ಭಾರತ್ ಆಟೋ ಕಾರ್ಸ್ ನ ಪ್ರವೀಣ್ ಕುಮಾರ್ ಹೆಚ್.ಎಸ್, ಶ್ರೀರಾಮ್ ಪೈನಾನ್ಸ್ ನ ಮ್ಯಾನೇಜರ್ ಸುಭಾಶ್ ಪುದ್ದರಬೈಲು, ಪ್ರಮೋದ್ ಬಂಗೇರ ನೆರಿಯ ಮೊದಲಾದವರು ಉಪಸ್ಥಿತರಿದ್ದರು.

Related posts

ಕನ್ಯಾಡಿ: ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ಹನುಮಾನ್ ರಥೋತ್ಸವ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

Suddi Udaya

ಜಿಲ್ಲಾ ಮಟ್ಟದ ಕ್ರೀಡಾಕೂಟ: ಬಜಿರೆ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಎಸ್‌.ಡಿ‌.ಎಂ. ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಮದ್ದಡ್ಕ : ಬೈಕ್ ಮತ್ತು ಕಾರು ಭೀಕರ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ ಯುವವಾಹಿನಿ ಮಹಿಳಾ ಸಂಚಲನಾ ಸಮಿತಿಯಿಂದ “ಮನಸು “ಅಂತರಾಳದ ಅವಲೋಕನ

Suddi Udaya
error: Content is protected !!