
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟ ಎಚ್ ರಾಜ ಇವರ ಏಕೈಕ ಪುತ್ರರಾದ ಪದ್ಮಪ್ರಸಾದ್ (49ವ) ಹೃದಯಘಾತದಿಂದ ನ. 10 ರಂದು ನಿಧನರಾದರು.
ಇವರು ಕಳೆದ ಕೆಲ ಸಮಯದಿಂದ ಗುರುವಾಯನಕೆರೆಯ ಖಾಸಾಗಿ ಕಾಲೇಜಿನಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು, ಕುಟುಂಬಸ್ಥರು, ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.













