28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗೆ ಕರೆ

ರೆಖ್ಯ: ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನ.10 ರಂದು ರೆಖ್ಯ ಗುಡ್ರಾದಿ ಗುಡ್ರಾಮಲ್ಲೇಶ್ವರ ಸಭಾ ವೇದಿಕೆಯಲ್ಲಿ ನೆರವೇರಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅಶ್ವಿನಿ ನಾಯಕ್, ಈಶ್ವರ ಕೊಠಾರಿ, ಚಂದ್ರ ಮೊಗವೀರ್ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಶ್ವಿನಿ ನಾಯಕ್ ಅವರು ಸನಾತನ ಧರ್ಮ ಎದುರಿಸುತ್ತಿರುವ ಸಮಸ್ಯೆಗಳ ಹಾಗೂ ಅದಕ್ಕೆ ಪರಿಹಾರ ವಿಷಯವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನ್ಯಾಯವಾದಿ ಈಶ್ವರ ಕೊಠಾರಿ ಅವರು ಹಿಂದೂ ಸಂಘಟನೆಯ ಅವಶ್ಯಕತೆ ವಿಷಯವಾಗಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಧಿಕಾರಿ ಚಂದ್ರ ಮೊಗೇರ ರವರು ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಿಂದುತ್ವಕ್ಕಾಗಿ ಕಾರ್ಯ ನಿರ್ವಹಿಸಿದ ಕೈಕುರೆ ಮಂಜುನಾಥ್ ಗೌಡ ಹಾಗೂ ಎಸ್ ಕೆ ಡಿ ಆರ್ ಡಿ ಪಿ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ರೆಖ್ಯ ಹಿಂದೂ ಜನಜಾಗೃತಿ ಸಮಿತಿಯ ಸರ್ವ ಸದಸ್ಯರು, ಗುಡ್ರಾ ಮಲ್ಲೇಶ್ವರ ದೇವಳದ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಜಯರಾಮ್ ನೆಲ್ಲಿತ್ತಾಯ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷರಾದ ರಾಜು ಸಾಲ್ಯಾನ್, ಶಿಶಿಲ ಗ್ರಾ.ಪಂ ಅಧ್ಯಕ್ಷರಾದ ಸುಧೀನ್.ಡಿ, ಅರಸಿನಮಕ್ಕಿ ಗ್ರಾ.ಪಂ ನಿಕಟ ಪೂರ್ವಧ್ಯಕ್ಷ ನವೀನ್ ರೆಖ್ಯ, ಉಪಾಧ್ಯಕ್ಷರಾದ ಸುಧೀರ್ ಕುಮಾರ್ ಎಂ.ಎಸ್, ಕರುಣಾಕರ ಶಿಶಿಲ, ಗಣೇಶ್.ಕೆ ಹೊಸ್ತೋಟ, ಸಿ ಎ ಬ್ಯಾಂಕ್ ನಿರ್ದೇಶಕರಾದ ಬೇಬಿ ಕಿರಣ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.


ಮಾಧವಿ ಪೈ ಸ್ವಾಗತಿಸಿ ನಿರೂಪಿಸಿದರು, ಶಂಕನಾದವನ್ನು ಶಶಿಧರ್ ಮಾಕಳ ನೆರವೇರಿಸಿದರು, ಕರುಣಾಕರ್ ಅಭ್ಯಂಕರ್ ಅವರು ವೇದ ಮಂತ್ರ ಪಠಣ ಮಾಡಿದರು. ಸಮಿತಿಯ ಪರಿಚಯವನ್ನು ಹರೀಶ್ ಬೆಳಾಲು ನಿರ್ವಹಿಸಿದರು. ಪ್ರಶಾಂತ್ ಏನ್ಮಾಡಿ ವಂದಿಸಿದರು.

Related posts

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಯಕ್ಷಗಾನ ತರಗತಿ – “ಯಕ್ಷ ಭಾರತೀ” ಉದ್ಘಾಟನೆ

Suddi Udaya

ನಿವೃತ್ತ ಯೋಧ ಡಾ.ಕೆ.ಎಸ್ ಗೋಪಾಲಕೃಷ್ಣ ಕಾಂಚೋಡು ಅವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ

Suddi Udaya

ಸಮಾಜ ಸೇವಾಟ್ರಸ್ಟ್ ನ ಸಂಸ್ಥಾಪಕ ರವಿ ಕಕ್ಕೆಪದವು ರವರ ಮಾಗದರ್ಶನದಲ್ಲಿ ಕುಮಾರಧಾರದಿಂದ ಕಾಶಿಕಟ್ಟೆಯವರೆಗೆ ಸ್ವಚ್ಛತಾ ಕಾರ್ಯ

Suddi Udaya

ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ, ಗೋ ಪೂಜೆ, ವಾಹನ ಪೂಜೆ ,ಆಯುಧ ಪೂಜೆ ಹಾಗೂ ಹೆಣ್ಣು ಕರು ದಾನ ಕಾರ್ಯಕ್ರಮ

Suddi Udaya

ಡಿ.28 (ನಾಳೆ) ವಿದ್ಯುತ್ ನಿಲುಗಡೆ

Suddi Udaya

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಆರಂಭ: ಸಿ.ಬಿ.ಜಿ ಘಟಕದ ಲೋಕಾರ್ಪಣೆ

Suddi Udaya
error: Content is protected !!