ಬೆಳ್ತಂಗಡಿ: ಕುಕ್ಕೆ ಸುಬ್ರಹ್ಮಣ್ಯದ ಸಮಾಜ ಸೇವಾಟ್ರಸ್ಟ್ ನ ಸಂಸ್ಥಾಪಕ ರವಿ ಕಕ್ಕೆಪದವು ರವರ ಮಾರ್ಗದರ್ಶನದಲ್ಲಿ ಕುಮಾರಧಾರ ರಸ್ತೆಯಿಂದ ಕಾಶಿಕಟ್ಟೆಯವರೆಗಿನ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಇದ್ದ ಕಸಕಡ್ಡಿಗಳು, ಪ್ಲಾಸ್ಟಿಕ್ ಬಾಟಲ್ಗಳು , ಪ್ಲಾಸ್ಟಿಕ್ ಚೀಲಗಳು ಹಾಗೂ ಇನ್ನಿತರ ಕಚ್ಚವಸ್ತುಗಳ ಸ್ವಚ್ಛತಾ ಕಾರ್ಯವು ನಡೆಯಿತು.

ನಂತರ ರವಿಕಕ್ಕೆಪದವು ರವರು ದಿನದಿಂದ ದಿನಕ್ಕೆ ಕಸಕಡ್ಡಿಗಳು ಹೆಚ್ಚಾಗಿದ್ದು ರಸ್ತೆಗೆ ಹಾಕುವವರು ಯಾರೆಂದು ತಿಳಿಯಲು ಸುಬ್ರಹ್ಮಣ್ಯ ಮುಖ್ಯರಸ್ತೆಗಳಿಗೆ ಸಿಸಿಟಿವಿಯನ್ನು ಅಳವಡಿಸಬೇಕೆಂದು ಗ್ರಾಮ ಪಂಚಾಯಿತಿಗಳಿಗೆ ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚಿನ ಸ್ವಯಂ ಸೇವಕರು ಪಾಲ್ಗೋಂಡಿದ್ದರು.












