ಕನ್ಯಾಡಿ-1: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಡಿ.14 ರಂದು ಶಾಲಾ ಆವರಣದಲ್ಲಿ ನಡೆಯಲಿದೆ.
ಸಭಾಧ್ಯಕ್ಷ ಯು.ಟಿ. ಖಾದರ್ ಘನ ಉಪಸ್ಥಿತರಿರಲಿದ್ದಾರೆ. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ ಎಸ್. ಗೌರವ ಉಪಸ್ಥಿತರಿದ್ದು ಸಭಾಧ್ಯಕ್ಷೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ.
ಸಂಜೆ ಕನ್ಯಾಡಿ-1 & ಕೇಲ್ತಾಜೆ ಅಂಗನವಾಡಿ ಮಕ್ಕಳಿಂದ ‘ಚಿಣ್ಣರ ಚಿಲಿಪಿಲಿ’ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ “ಸಾಂಸ್ಕೃತಿಕ ಕಾರ್ಯಕ್ರಮ” , ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ “ವೈವಿಧ್ಯಮಯ ಕಾರ್ಯಕ್ರಮ” , ಶಾಲಾ ಹಳೆ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈಭವ ಹಾಗೂ ಗುಣಪಾಲ ಎಂ.ಎಸ್. ಉಜಿರೆ ಇವರ ಸಾರಥ್ಯದಲ್ಲಿ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ಇವರಿಂದ “ಮಾಯೊದ ತುಡರ್” ಎಂಬ ತುಳು ಭಕ್ತಿಪ್ರಧಾನ ಹಾಸ್ಯಮಯ ನಾಟಕ ನಡೆಯಲಿದೆ.













