July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ತಮ್ಮ ದೇಶದ ಜನರೆದುರು ಕ್ಷಮೆಯಾಚಿಸಲಿ: ರಕ್ಷಿತ್ ಶಿವರಾಂ

ಬೆಳ್ತಂಗಡಿ: “ನಿತ್ಯವೂ ಅಂಬೇಡ್ಕರ್ ಅವರ ಹೆಸರನ್ನು ಜಪಿಸುವುದು ವ್ಯಸನ” ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳುವ ಮೂಲಕ ಬಾಬಾ ಸಾಹೇಬರ ಬಗ್ಗೆ ಗೃಹ ಸಚಿವರಿಗಿರುವ ದ್ವೇಷವನ್ನು ಹೊರಹಾಕಿದ್ದಾರೆ. ಸಂವಿಧಾನ ರಚನೆಯೂ ಸೇರಿದಂತೆ ಇಡೀ ಭಾರತ ದೇಶದ ಶೋಷಿತರ ಧ್ವನಿಯಾಗಿರುವ ಬಾಬಾ ಸಾಹೇಬರನ್ನ ಅವಮಾನಿಸಿವುದು ಈ ನೆಲಕ್ಕೆ ಬಗೆದ ದ್ರೋಹ.

ಬಹು ಸಂಖ್ಯಾತ ದಲಿತ, ಆದಿವಾಸಿ, ಹಿಂದುಳಿದ ವರ್ಗದ ಜನರು ಸ್ವಾಭಿಮಾನ, ಘನತೆ ಹಾಗೂ‌ ಗರ್ವದಿಂದ ಬದುಕಲು ಬಾಬಾ ಸಾಹೇಬರು ನೀಡಿದ ಹಕ್ಕುಗಳ ಕಾರಣಕ್ಕಾಗಿ ನಿತ್ಯವೂ ಅವರ ಜಪ ಮಾಡುವುದರಲ್ಲಿ ತಪ್ಪೇನಿದೆ? ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿದ ಜನರು ಸ್ವಾಭಿಮಾನದಿಂದ ಬಾಬಾ ಸಾಹೇಬರ ಹೆಸರು ಜಪಿಸುವುದು ತಪ್ಪೇ? ಗೃಹ ಸಚಿವ ಅಮಿತಾ ಶಾ ಅವರಲ್ಲಿ ಯಾಕಿಷ್ಟು ಬಾಬಾ ಸಾಹೇಬರ ಬಗ್ಗೆ ತಾತ್ಸಾರ ಎಂದು ದೇಶದ ಜನರೆದುರು ಸತ್ಯ ಹೇಳಲಿ.

ಬಿಜೆಪಿ ಪಕ್ಷ ನಿತ್ಯವೂ ಬಾಬಾ ಸಾಹೇಬರನ್ನು ಹಾಗೂ ಅವರ ಚಿಂತನೆಯನ್ನು ಅವಮಾನಿಸುತ್ತಾ, ಅಪಮಾನಿಸುತ್ತಾ ಅವರು ನೀಡಿದ ಸಂವಿಧಾನದ ಬಗ್ಗೆ ದ್ವೇಷ ಕಾರುತ್ತಲೇ ಬರುತ್ತಿರುವದಕ್ಕೆ ಇತಿಹಾಸವೇ ಸಾಕ್ಷಿ.
ತಮ್ಮ ಹುದ್ದೆಯ ಘನತೆಗೆ ಅಗೌರವವಾಗಿ ನಡೆದುಕೊಳ್ಳುವುದು ಸಾರ್ವಜನಿಕ ರಾಜಕೀಯ ಜೀವನದಲ್ಲಿ ಮುಂದುವರೆಯಲು ಅರ್ಹರಲ್ಲ. ಕೂಡಲೇ ಗೃಹ ಸಚಿವ ಈ ದೇಶದ ಎದುರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ.

Related posts

ಹಲವಾರು ಶವಗಳನ್ನು ಹೂತಿದ್ದೆ ಎಂಬ ದೂರು ಪ್ರಕರಣ: ಎಸ್.ಐ.ಟಿ. ತನಿಖಾ ತಂಡದಿಂದ ಸತ್ಯಾಂಶ ಅತಿ ಶೀಘ್ರವಾಗಿ ಬಹಿರಂಗ ಪಡಿಸಲಿ: ಕೆ. ಪಾರ್ಶ್ವನಾಥ್ ಜೈನ್

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಸಂಭ್ರಮ: ಭಾರತೀಯ ಜೀವ ವಿಮಾ ನಿಗಮ ದಿಂದ ಡಾ.ಹೆಗ್ಗಡೆಯವರಿಗೆ ಗೌರವಾರ್ಪಣೆ; ಡಾ. ಹೆಗ್ಗಡೆಯವರ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಸಾಮಾಜಿಕ ಜಾಲತಾಣ ನೂತನ ಸಂಚಾಲಕರಾಗಿ ಜಯಂತ್ ಜಾನು

Suddi Udaya

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಉದ್ಘಾಟನೆ

Suddi Udaya

ಕೇರಳ ವಿಧಾನಸಭಾ ಚುನಾವಣೆ: ಪ್ರಭಾರಿಯಾಗಿ ಶಾಸಕ ಹರೀಶ್ ಪೂಂಜ ನೇಮಕ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್, ಭಾರತೀಯ ಕಥೊಲಿಕ್ ಯುವ ಸಂಚಲನ ಹಾಗೂ ಯುವ ಕಥೊಲಿಕ್ ವಿದ್ಯಾರ್ಥಿ ಸಂಚಲನ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya
error: Content is protected !!