25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ತಮ್ಮ ದೇಶದ ಜನರೆದುರು ಕ್ಷಮೆಯಾಚಿಸಲಿ: ರಕ್ಷಿತ್ ಶಿವರಾಂ

ಬೆಳ್ತಂಗಡಿ: “ನಿತ್ಯವೂ ಅಂಬೇಡ್ಕರ್ ಅವರ ಹೆಸರನ್ನು ಜಪಿಸುವುದು ವ್ಯಸನ” ಎಂದು ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳುವ ಮೂಲಕ ಬಾಬಾ ಸಾಹೇಬರ ಬಗ್ಗೆ ಗೃಹ ಸಚಿವರಿಗಿರುವ ದ್ವೇಷವನ್ನು ಹೊರಹಾಕಿದ್ದಾರೆ. ಸಂವಿಧಾನ ರಚನೆಯೂ ಸೇರಿದಂತೆ ಇಡೀ ಭಾರತ ದೇಶದ ಶೋಷಿತರ ಧ್ವನಿಯಾಗಿರುವ ಬಾಬಾ ಸಾಹೇಬರನ್ನ ಅವಮಾನಿಸಿವುದು ಈ ನೆಲಕ್ಕೆ ಬಗೆದ ದ್ರೋಹ.

ಬಹು ಸಂಖ್ಯಾತ ದಲಿತ, ಆದಿವಾಸಿ, ಹಿಂದುಳಿದ ವರ್ಗದ ಜನರು ಸ್ವಾಭಿಮಾನ, ಘನತೆ ಹಾಗೂ‌ ಗರ್ವದಿಂದ ಬದುಕಲು ಬಾಬಾ ಸಾಹೇಬರು ನೀಡಿದ ಹಕ್ಕುಗಳ ಕಾರಣಕ್ಕಾಗಿ ನಿತ್ಯವೂ ಅವರ ಜಪ ಮಾಡುವುದರಲ್ಲಿ ತಪ್ಪೇನಿದೆ? ಸಾವಿರಾರು ವರ್ಷಗಳಿಂದ ಶೋಷಣೆ ಅನುಭವಿಸಿದ ಜನರು ಸ್ವಾಭಿಮಾನದಿಂದ ಬಾಬಾ ಸಾಹೇಬರ ಹೆಸರು ಜಪಿಸುವುದು ತಪ್ಪೇ? ಗೃಹ ಸಚಿವ ಅಮಿತಾ ಶಾ ಅವರಲ್ಲಿ ಯಾಕಿಷ್ಟು ಬಾಬಾ ಸಾಹೇಬರ ಬಗ್ಗೆ ತಾತ್ಸಾರ ಎಂದು ದೇಶದ ಜನರೆದುರು ಸತ್ಯ ಹೇಳಲಿ.

ಬಿಜೆಪಿ ಪಕ್ಷ ನಿತ್ಯವೂ ಬಾಬಾ ಸಾಹೇಬರನ್ನು ಹಾಗೂ ಅವರ ಚಿಂತನೆಯನ್ನು ಅವಮಾನಿಸುತ್ತಾ, ಅಪಮಾನಿಸುತ್ತಾ ಅವರು ನೀಡಿದ ಸಂವಿಧಾನದ ಬಗ್ಗೆ ದ್ವೇಷ ಕಾರುತ್ತಲೇ ಬರುತ್ತಿರುವದಕ್ಕೆ ಇತಿಹಾಸವೇ ಸಾಕ್ಷಿ.
ತಮ್ಮ ಹುದ್ದೆಯ ಘನತೆಗೆ ಅಗೌರವವಾಗಿ ನಡೆದುಕೊಳ್ಳುವುದು ಸಾರ್ವಜನಿಕ ರಾಜಕೀಯ ಜೀವನದಲ್ಲಿ ಮುಂದುವರೆಯಲು ಅರ್ಹರಲ್ಲ. ಕೂಡಲೇ ಗೃಹ ಸಚಿವ ಈ ದೇಶದ ಎದುರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ತಿಳಿಸಿದ್ದಾರೆ.

Related posts

ಲಾಯಿಲ ತರಬೇತಿ ಕೇಂದ್ರದಲ್ಲಿ ಕಂಪ್ಯೂಟರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ಕೊಕ್ಕಡದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜ.24: ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಬೆಳ್ತಂಗಡಿ: ಪೃಥ್ವಿ ಜುವೆಲ್ಸ್ ಮಹಾ ಪರ್ವದಲ್ಲಿ ಬಂಪರ್ ಬಹುಮಾನಗಳ ಅದೃಷ್ಟ ಲಕ್ಕಿ ಡ್ರಾ ವಿಜೇತರು

Suddi Udaya

ಬಂದಾರು-ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಆರಂಭ

Suddi Udaya

ರಾಷ್ಟ್ರಮಟ್ಟದ ಯೂತ್ ಗೇಮ್ಸ್ : ಉಜಿರೆಯ‌ ಎಸ್.ಡಿ.ಎಂ ಶಾಲೆ ವಿದ್ಯಾರ್ಥಿನಿ ಚಾಂಪಿಯನ್

Suddi Udaya
error: Content is protected !!