September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಹತ್ಯಡ್ಕ ಸಹಕಾರಿ ಸಂಘದ ಚುನಾವಣೆ :ಸಹಕಾರ ಭಾರತೀಯ ಅಭ್ಯರ್ಥಿಗಳ ‘ಮಹಾಭಿಯಾನ’ ಪ್ರಚಾರಕ್ಕೆ ಅರುಣ್ ಕುಮಾರ್ ಪುತ್ತಿಲರಿಂದ ಚಾಲನೆ


ಅರಸಿನಮಕ್ಕಿ: ಹತ್ಯಡ್ಕ ಸಹಕಾರಿ ಸಂಘದ ಚುನಾವಣೆಯು ಜ.8ರಂದು ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳ ಮನೆ ಮನೆ ಪ್ರಚಾರದ ‘ಮಹಾಭಿಯಾನ’ಕ್ಕೆ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಜ. 5ರಂದು ಚಾಲನೆ ನೀಡಿದರು.

ವೇದಿಕೆಯಲ್ಲಿ ಸಹಕಾರ ಭಾರತೀಯ ಅಭ್ಯರ್ಥಿಗಳಾದ ರಾಘವೇಂದ್ರ ನಾಯಕ್, ರಾಜು ಕೆ.ಸಾಲ್ಯಾನ್, ಕೊರಗಪ್ಪ ಗೌಡ ಪಡ್ಪು, ರತೀಶ್ ಗೌಡ, ವರದಶಂಕರ ದಾಮ್ಲೆ , ಮುರಳಿಧರ ಶೆಟ್ಟಿಗಾರ್, ಬೇಬಿ ಕಿರಣ್, ಕೃಷ್ಣಪ್ಪ ಗೌಡ, ಶ್ರೀಮತಿ ತಾರಾ ಚಿಪ್ಲುನ್ಕರ್, ಶ್ರೀಮತಿ ಗಂಗಾವತಿ, ಶ್ರೀಮತಿ ಬೇಬಿ, ನಾಗೇಶ್, ಶಿಶಿಲ ಗ್ರಾಪಂ ಅಧ್ಯಕ್ಷ ಸುದಿನ್ ಕೆ., ಅರಸಿನಮಕ್ಕಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ ಗಣೇಶ್ ಅರಸಿನಮಕ್ಕಿ,ಜಯಪ್ರಕಾಶ, ವಿನಯಚಂದ್ರ ಟಿ. ಶಿಬಾಜೆ ಗ್ರಾ.ಪಂ. ಉಪಾಧ್ಯಕ್ಷ ದಿನಕರ ಕುರುಪ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ‘ಮಹಾಭಿಯಾನ’ದ ಪ್ರಚಾರದ ತಂಡಕ್ಕೆ ಬೇಕಾದ ವಿವಿಧ ವಸ್ತುಗಳನ್ನು ಕರುಣಾಕರ ಶಿಶಿಲರ ವರಿಗೆ ಸಾಂಕೇತಿಕವಾಗಿ ನೀಡಲಾಯಿತು. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.’ಮಹಾಭಿಯಾನ’ದ ಪ್ರಯುಕ್ತ ಅರಸಿನಮಕ್ಕಿ, ರೆಖ್ಯಾ, ಶಿಶಿಲ, ಶಿಬಾಜೆಯಲ್ಲಿ ತಂಡ ತಂಡವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸಲಿದ್ದಾರೆ. ರಾಘವೇಂದ್ರ ನಾಯಕ್ ಸ್ವಾಗತಿಸಿ, ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿ, ರತೀಶ್ ಗೌಡ ವಂದಿಸಿದರು.

Related posts

ಕೊಕ್ಕಡ ಹಿಂದೂ ಸಂಗಮ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತಲೆಮರೆಸಿಕೊಂಡಿರುವ ವಿಠಲ್ ಗೌಡರ ಬಂಧನಕ್ಕಾಗಿ ಪೊಲೀಸರಿಂದ ಹುಡುಕಾಟ

Suddi Udaya

 ಮಿತ್ತಬಾಗಿಲು ಗ್ರಾ.ಪಂ. ನಿಂದ ಸ್ವಚ್ಚತಾ ಅಭಿಯಾನ 

Suddi Udaya

ಅಳದಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಒಕ್ಕೂಟದ ಸಭೆ

Suddi Udaya

ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ

Suddi Udaya

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

Suddi Udaya
error: Content is protected !!