July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ವಲಯದ ಬಂಟರ ಸಂಘದ ಕ್ರೀಡೋತ್ಸವ 2025

ಮಡಂತ್ಯಾರು : ಬಂಟರ ಸಂಘ ಮಡಂತ್ಯಾರು ವಲಯದ ವಲಯ ಬಂಟರ ಕ್ರೀಡೋತ್ಸವ 2025 ಜ.19 ರಂದು ಗರ್ಡಾಡಿ ಯುವಕ ಮಂಡಲದ ಕ್ರೀಡಾಂಗಣದಲ್ಲಿ ಜರಗಿತು.

ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ಕಂಗಿತ್ತಿಲು ವಹಿಸಿದರು. ಕಾರ್ಯಕ್ರಮವನ್ನು ಕಂಬಳ ಕ್ರೀಡೆಯಲ್ಲಿ ಹೆಸರುಮಾಡಿದ ಹಂಕಾರ್ಜಾಲು ಶ್ರೀನಿವಾಸ್ ಶೆಟ್ರ ಹಾಗೂ ವಲಯ ಗೌರವ ಅಧ್ಯಕ್ಷ ವಿಠ್ಠಲ ಶೆಟ್ಟಿ ಮೂಡಯೂರು ಅವರ ಅಮೃತ ಹಸ್ತದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ ಪೂಂಜ, ಶಶಿಧರ ಶೆಟ್ಟಿ ನವಶಕ್ತಿ, ಶ್ರೀಮತಿ ಜಯಲಕ್ಷ್ಮಿ ಎಂ ಸಾಮನಿ, ಶ್ರೀಮತಿ ನಳಿನಿ ಪೂಂಜಾ, ಶ್ರೀಮತಿ ಮೀನಾಕ್ಷಿ ಶೆಟ್ಟಿ, ಜಯರಾಮ ಶೆಟ್ಟಿ ಮುಂಡಾಡಿ ಗುತ್ತು, ರಾಜೇಶ್ ಶೆಟ್ಟಿ ನವಶಕ್ತಿ, ಅಜಿತ್ ಕುಮಾರ್ ಶೆಟ್ಟಿ ಕೊರಿಯರ್, ರಘುನಾಥ ರೈ, ಎಂ ಜಯರಾಮ ಭಂಡಾರಿ, ಸುರೇಶ್ ಶೆಟ್ಟಿ ಬೊಲ್ಲಜೆ, ರಾಜೇಶ್ ಶೆಟ್ಟಿ ಲಾಯಿಲ, ವಸಂತ ಶೆಟ್ಟಿ ಶ್ರದ್ದಾ ಪ್ರಿಂಟರ್ಸ್, ನವೀನ್ ಕೆ. ಸಾಮನಿ, ಪುಷ್ಪರಾಜ್ ಶೆಟ್ಟಿ ಭಾಗವಹಿಸಿದ್ದರು.

ವಲಯ ಕಾರ್ಯದರ್ಶಿಯಾದ ನಾರಾಯಣ ಶೆಟ್ಟಿ ನೆತ್ತರ ಪ್ರಾಸ್ತಾವಿಕವಾಗಿ ಮಾತಾಡಿ ಈ ಕ್ರೀಡಾಕೂಟದ ಉದ್ದೇಶ ಹಾಗೂ ಒಗ್ಗಟ್ಟಿನ ಬಗ್ಗೆ ತಿಳಿಸಿದರು. ದಿನ ಪೂರ್ತಿ ನಡೆದ ಅನೇಕ ಗ್ರಾಮೀಣ ಕ್ರೀಡೆಗಳ ಕ್ರೀಡೋತ್ಸವದಲ್ಲಿ ಬಂಟ ಮಕ್ಕಳು ಮಹಿಳೆಯರು ಸೇರಿದಂತೆ ಸುಮಾರು 1000 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿತ್ತು.

ಸಂಜೆಯ ಸಮಾರೋಪದಲ್ಲಿ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡರುಗುಡ್ಡೆ ವಹಿಸಿದರು. ಸುಬ್ಬಯ ರೈ ಇಚ್ಲಂಪಾಡಿ ಅಧ್ಯಕ್ಷರು ಬಂಟರ ಯಾನೆ ನಾಡವರ ಸಂಘ ಕಾಸರಗೋಡು, ನಿತ್ಯಾನಂದ ಶೆಟ್ಟಿ ಉದ್ಯಮಿಗಳು, ಶ್ರೀಮತಿ ದಿವ್ಯಶೆಟ್ಟಿ ಗುಜ್ಜೋಟ್ಟು, ದಿವಾಕರ ಶೆಟ್ಟಿ ಕಂಗಿತ್ತಿಲು, ರಾಜಶೇಖರ ಶೆಟ್ಟಿ ಭಂದರಿಗುಡ್ಡೆ, ಶ್ರೀನಿವಾಸ ಶೆಟ್ಟಿ ಹಂಕರ್ಜಾಲು ಭಾಗವಹಿಸಿದ್ದರು.

ಚೇತನ್ ಮುಂಡಾಡಿ ಅವರನ್ನು ವಲಯ ಬಂಟ ಕಲಾ ರತ್ನ ಪ್ರಶಸ್ತಿ ಹಾಗೂ ಸುಶಾಂತ್ ಶೆಟ್ಟಿ ಅವರನ್ನು ವಲಯ ಬಂಟ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಗಳಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪದೆಂಜಿಲ , ಶಿವಶಂಕರ್ ಶೆಟ್ಟಿ ಮೂಡಾಯೂರು, ದಿವಾಕರ ಶೆಟ್ಟಿ ಹಂಕರ್ಜಾಳು ಸಹಕರಿಸಿದರು, ಕಾರ್ಯಕ್ರಮವನ್ನು ಸುರೇಶ್ ಶೆಟ್ಟಿ , ಭರತ್ ಶೆಟ್ಟಿ, ಯಶ್ವಂತ್ ಶೆಟ್ಟಿ ಹಾಗೂ ಸುಜಯ್ ಶೆಟ್ಟಿ ನಡೆಸಿಕೊಟ್ಟರು..

Related posts

ಜೆಸಿಐ ಮಡಂತ್ಯಾರಿಗೆ ಜೆಸಿಐ ಭಾರತದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ಭಕ್ತಿಗೀತೆ ಬಿಡುಗಡೆ

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷ ಆನಂದ ಅಡಿಲು ರವರಿಗೆ ಸನ್ಮಾನ ಮತ್ತು ಪಿಡಿಒ ಸವಿತಾ ರವರಿಗೆ ಬೀಳ್ಕೊಡುಗೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ಮಕ್ಕಳ ಗ್ರಾಮ ಸಭೆ

Suddi Udaya

ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಆಹಾರ ಮತ್ತು ಪೌಷ್ಠಿಕತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya
error: Content is protected !!