23.2 C
ಪುತ್ತೂರು, ಬೆಳ್ತಂಗಡಿ
June 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

ಬೆಳ್ತಂಗಡಿ: ಸ್ಥಳೀಯ ಸ್ಥಳಗಳ ಸರಿಯಾದ ಮಾಹಿತಿ ಇಲ್ಲದಿದ್ದರೆ ಏನೆಲ್ಲಾ ಯಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಲೋಕೋಪಯೋಗಿ ಇಲಾಖೆಯವರು ಅಳದಂಗಡಿಯಲ್ಲಿ ಹಾಕಿರುವ ನಾಮಫಲಕವೇ ಸಾಕ್ಷಿ.


ಇಲಾಖೆಯು ಗುರುವಾಯನಕೆರೆ- ನಾರಾವಿ- ಕಾರ್ಕಳ ರಾಜ್ಯಹೆದ್ದಾರಿಯಲ್ಲಿ ಅಲ್ಲಲ್ಲಿ ಊರುಗಳ ಹೆಸರಿರುವ ನಾಮಫಲಕಗಳನ್ನು ಅಳವಡಿಸಿದೆ. ಇವುಗಳಲ್ಲಿ ಅಳದಂಗಡಿಯಲ್ಲಿ ದೈವಸ್ಥಾನದ ಪಕ್ಕದಲ್ಲಿ ಹಾಕಿರುವ ಫಲಕದಲ್ಲಿ ದೈವದ ಹೆಸರು ಅಪಭ್ರಂಶಗೊಂಡಿದೆ. ಶ್ರೀಸತ್ಯದೇವತೆ ದೈವಸ್ಥಾನ ಅಳದಂಗಡಿ ಎಂದು ಬರೆಯುವ ಬದಲು ” ಸತ್ಯದೇವಾತ ದೇವಸ್ಥಾನ ಅಳದಂಗದಿ ” ಎಂದು ಬರೆಯಲಾಗಿದೆ. ಸತ್ಯದೇವತೆ ಇರುವಲ್ಲಿ ಸತ್ಯದೇವಾತ; ದೈವಸ್ಥಾನ ಇರಬೇಕಾದಲ್ಲಿ ದೇವಸ್ಥಾನ; ಅಳದಂಗಡಿಯ ಬದಲಾಗಿ ಅಳದಂಗದಿ ಆಗಿದೆ.


ಫಲಕ ಹೀಗೇಯೇ ಕೆಲಕಾಲ ಇದ್ದರೆ ಅದರಲ್ಲಿ ಇರುವ ಹೆಸರೇ ಚಾಲ್ತಿಯಲ್ಲಿ ಬಂದರೆ ಅಚ್ಚರಿಯಿಲ್ಲ. ಇನ್ನಾದರೂ ಇಲಾಖೆಯವರು ಸರಿಯಾದ ಫಲಕ ಅಳವಡಿಸುವರೇ ಕಾದು ನೋಡಬೇಕಾಗಿದೆ.

Related posts

ಚಿನ್ನಾಭರಣ ಪರೀಕ್ಷಕನ ವಜಾ ಪ್ರಕರಣ; ಪ್ರಕರಣದ ನಿಗೂಢತೆಯ ಬಯಲಿಗೆ ಆಗ್ರಹ; ಮಾ.18ರಂದು ಕೊಕ್ಕಡದಲ್ಲಿ ಪ್ರತಿಭಟನೆ

Suddi Udaya

ಬೆಳ್ತಂಗಡಿ: ಅಪಘಾತ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ನಾಲ್ಕೂರು: ಸಮಾಜ ಸೇವಕ ಹೆಚ್. ಧರ್ಣಪ್ಪ ಪೂಜಾರಿಯವರಿಗೆ ಯುವಶಕ್ತಿ ಫ್ರೆಂಡ್ಸ್ ನಿಂದ ಸನ್ಮಾನ

Suddi Udaya

ವಸಂತಿ ಟಿ. ನಿಡ್ಲೆ ರವರು ಆಲ್ ಇಂಡಿಯಾ ವಿಮೆನ್ ಅಚೀವರ್-2023 ಪ್ರಶಸ್ತಿಗೆ ಆಯ್ಕೆ

Suddi Udaya

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಸಭೆ

Suddi Udaya

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾತೃ ಪೂಜನ, ಮಾತೃ ವಂದನ ಮತ್ತು ಮಾತೃ ಭೋಜನ ವಿಶಿಷ್ಟ ಭಾವಪೂರ್ಣ ಕಾರ್ಯಕ್ರಮ

Suddi Udaya
error: Content is protected !!