July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಿತ್ತಬಾಗಿಲು ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ನಡೆಯಿತೊಂದು ಪವಾಡ: ಕಲಶೋತ್ಸವ ಸಂದರ್ಭದಲ್ಲಿ ಮಾಂಗಲ್ಯ ಸರಮಾಲೆ ಕಳೆದುಕೊಂಡ ಮಹಿಳೆಗೆ ಮಂದಿರದ ಆವರಣದಲ್ಲೇ ಸಿಕ್ಕಿತು ಮಾಂಗಲ್ಯ

ಬೆಳ್ತಂಗಡಿ: ಮಿತ್ತಬಾಗಿಲು -ಮಲವಂತಿಗೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣ ಪ್ರಾರಂಭದ ಸಂದರ್ಭ ನಾರಾಯಣ ಗುರುಗಳ ಆಶೀರ್ವಾದದಂತೆ ಅತೀ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಒಳಗಾಗಿ ಭವ್ಯ ಮಂದಿರದ ಜೊತೆಗೆ ಗುರು ಭವನ ನಿರ್ಮಾಣ ಆಗಿತ್ತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕದ ದಿನದಂದು ಕಾಜೂರಿನ ಪದ್ಮಾವತಿಯವರ ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಪವನ್ ಮಾಂಗಲ್ಯ ಸರಮಾಲೆ ಕಳೆದುಕೊಂಡು ಬಿಟ್ಟಿದ್ದರು, ಹುಡುಕಾಟ ಕೂಡ ಆ ಸಮಯದಲ್ಲಿ ನಡೆಸಲಾಗಿತ್ತು,ಗುರುಗಳ ಮೌಲ್ಯ ಅರಿತ ಅವರು ಏನಾದರೂ ಮಾಂಗಲ್ಯ ಸರಮಾಲೆ ಸಿಕ್ಕಿದರೆ ಗುರುಪೂಜೆ ಇದೇ ಮಂದಿರದಲ್ಲಿ ನಡೆಸುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು.

ಹರಕೆ ಹೊತ್ತ ಫಲವೋ, ಅವರ ಪೂರ್ವ ಜನ್ಮದ ಪುಣ್ಯವೋ ಕಲಶೋತ್ಸವ ಕಳೆದು ಒಂದು ತಿಂಗಳ ಒಳಗಾಗಿ ಅವರ ಮಾಂಗಲ್ಯ ಸರಮಾಲೆ ಯಾವುದೇ ರೀತಿಯಲ್ಲಿ ಕಳೆಗುಂದದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ಆವರಣದಲ್ಲಿ ಸಿಕ್ಕಿದೆ.ಮಾಂಗಲ್ಯ ಸರಮಾಲೆ ಸಿಕ್ಕಿದ ಸಮಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಸಮಯ ಒಂದೇ ಆಗಿತ್ತು ಎಂದು ಸಂಘದ ಮುಖ್ಯಸ್ಥರಾದ ಸುರೇಂದ್ರ ಕೊಲ್ಲಿ ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಸರ್ಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ

Suddi Udaya

ಶಿಬಾಜೆ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಸುಲ್ಕೇರಿ: ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

Suddi Udaya

ಆಮಂತ್ರಣ ರಾಜ್ಯ ಸಮಿತಿಗೆ ಸದಸ್ಯರಾಗಿ ಹೆಚ್.ಕೆ ನಯನಾಡು ಆಯ್ಕೆ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!