23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪುತ್ತಿಲ ನಡುಕೇಯ೯ ತರವಾಡು ಟ್ರಸ್ಟ್‌ನಿಂದ ಕೊಯ್ಯೂರು ರಾಮಣ್ಣ ಪೂಜಾರಿ ದಂಪತಿಗೆ ಸನ್ಮಾನ

ಪುತ್ತಿಲ: ಪುತ್ತಿಲ ಗ್ರಾಮದ ನಡುಕೇಯ೯ ತರವಾಡು ಟ್ರಸ್ಟ್ ಆಶ್ರಯದಲ್ಲಿ ಫೆ. 9 ಆದಿತ್ಯವಾರದಂದು ಮೂಲ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ ಹಾಗೂ ತರವಾಡು ಟ್ರಸ್ಟ್‌ನ ಸಭೆ ಟ್ರಸ್ಟ್ ಅಧ್ಯಕ್ಷ ಆನಲೆ ಶೇಖರ ಪೂಜಾರಿರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.


ಇದೇ ಸಂದರ್ಭದಲ್ಲಿ ಕುಟುಂಬದ ಹಿರಿಯರೂ, ಯಜಮಾನರಾದ ಕೇರ್ಯ ರಾಮಪ್ಪ ಪೂಜಾರಿಯವರನ್ನೂ, ಕುಟುಂಬದ ಸದಸ್ಯರಾದ ಡಾ| ರಿತೇಶ್ ಕುಮಾರ್‌ರವರ ಬಾಬ್ತು ಅವರ ಹೆತ್ತವರಾದ ಕೆ.ರಾಮಣ್ಣ ಪೂಜಾರಿ ಕೊಯ್ಯೂರು ಮತ್ತು ಶಾಂತಿ ದಂಪತಿ ಹಾಗೂ ಕ್ರೀಡಾಪಟು ಲಿಶನ್ ಪುರಿಯ, ಸುಪ್ರೀತ್ ನಡುಕೇರ ಇವರನ್ನು ಸನ್ಮಾನಿಸಲಾಯಿತು. ಅಕ್ಷಿತಾ ಬೇನಪ್ಪು ಸನ್ಮಾನ ಪತ್ರ ವಾಚಿಸಿದರು. ದೈವಗಳಿಗೆ ಪರಿಚಾಲಕರಾಗಿ ಜಯಾನಂದ ಆನ ಸೇವೆಗೈದರು. ಕಾರ್ಯಕ್ರಮ ಸಂಯೋಜಕರಾದ ಸತೀಶ್ ಮಿತ್ತೇರಿಪಾದೆ ಸ್ವಾಗತಿಸಿ, ಚಂದ್ರಶೇಖರ ಮಿತ್ತೇರಿಪಾದೆ ವಂದಿಸಿದರು. ಕುಟುಂಬಸ್ಥರು ಭಾಗವಹಿಸಿದ್ದರು.
ವರದಿ:ಕೆ. ರಾಮಣ್ಣ ಪೂಜಾರಿ

Related posts

ಕಕ್ಕಿಂಜೆ ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ

Suddi Udaya

ಪೆರಿಂಜೆ: ಕಣಜದ ಹುಳ ಕಡಿದು ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಬೆಳ್ತಂಗಡಿ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ವತಿಯಿಂದ ವಿದ್ಯಾನಿಧಿ ಯೋಜನೆಗೆ ಕೊಡುಗೆ

Suddi Udaya

ಪಡಂಗಡಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮದ್ದಡ್ಕ ಒಕ್ಕೂಟ ಹಾಗೂ ಶೌರ್ಯ ವಿಪತ್ತು ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಕು. ಸೌಜನ್ಯ ಕೊಲೆ ಪ್ರಕರಣ: ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Suddi Udaya

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

Suddi Udaya
error: Content is protected !!