23.5 C
ಪುತ್ತೂರು, ಬೆಳ್ತಂಗಡಿ
June 8, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಗೇರುಕಟ್ಟೆ ಸೌಹಾರ್ದ ಟ್ರೋಫಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಗೇರುಕಟ್ಟೆ: ಲತೀಫ್ ಪರಿಮ, ಯೋಗಿಶ್ ಎಸ್.ಆರ್. ಹಾಗೂ ಸಾದಿಕ್ ಕೆಂಪಿ ರವರ ನೇತೃತ್ವದಲ್ಲಿ ಸೌಹಾರ್ದ ಟ್ರೋಫಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭವು ಫೆ.23ರಂದು ಹೈಸ್ಕೂಲ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಕರೀಮ್ ಗೇರುಕಟ್ಟೆ, ಲತೀಫ್ ಪರಿಮ, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ನೇವಿಲ್ ಮೊರಾಸ್, ನಿತೇಶ್ ಜಾರಿಗೆಬೈಲು, ಮನ್ಸೂರ್ ಜಿ, ಯೋಗಿಶ್ ಸುವರ್ಣ ಎಸ್.ಆರ್, ಹಬೀಬ್ ಕಜೆಮಾರ್, ರಫೀಕ್ ಪರಪ್ಪು, ಫಯಾಜ್ ಕೆ.ಎಂ., ಸಂದೀಪ್ ನಾಳ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ಶುಕೂರ್ ಕೆಂಪಿ ಉಪ್ಪಿನಂಗಡಿ ಹಾಗೂ ಯೋಗಿಶ್ ಎಸ್ ಆರ್. ಕಾರ್ಯ ನಿರ್ವಹಿಸಿದರು.

ಪ್ರಥಮ ಸ್ಥಾನವನ್ನು ಪ್ಲೇ ಬಾಯ್ಸ್ ಬೊಳ್ಳುಕಲ್ಲು, ದ್ವಿತೀಯ ಸ್ಥಾನವನ್ನು ವಿಫ್ನೇಶ್ ಪವರ್ ಸಿಸ್ಟಮ್ ನಾಳ, ತೃತೀಯ ಸ್ಥಾನವನ್ನು ಎಸ್.ಆರ್.ಹೆಚ್ ಗೇರುಕಟ್ಟೆ, ಚತುರ್ಥ ಸ್ಥಾನವನ್ನು ವೈ.ಎಫ್.ಓ ಓಡಿಲ್ನಾಳ ತಂಡ ಹಾಗೂ ಉತ್ತಮ ಶಿಸ್ತಿನ ತಂಡ ವೈ.ಎಫ್.ಓ ಓಡಿಲ್ನಾಳ ತಂಡ, ಸರಣಿ ಶ್ರೇಷ್ಠರಾಗಿ ಸಂದೀಪ್ ನಾಳ, ಪಂದ್ಯಶ್ರೇಷ್ಠರಾಗಿ ಸಾದಿಕ್ ಎರುಕಡಪ್ಪು, ಉತ್ತಮ ಬ್ಯಾಟ್ಸ್‌ಮನ್ ಆಗಿ ಅಮೀನ್ ಎರುಕಡಪ್ಪು, ಉತ್ತಮ ಬೌಲರ್ ಆಗಿ ರವಿ ನಾಳ, ಉತ್ತಮ ಫೀಲ್ಡರ್ ಆಗಿ ಸಂಶುದ್ದೀನ್ ಜಾರಿಗೆಬೈಲು, ಉತ್ತಮ ವಿಕೇಟ್ ಕೀಪರ್ ಆಗಿ ಶರೀಫ್ ಗೇರುಕಟ್ಟೆ, ಉದಯೋನ್ಮುಕ ಆಟಗಾರನಾಗಿ ಹಾಸಿಮ್ ಗೇರುಕಟ್ಟೆ ಪ್ರಶಸ್ತಿ ಸ್ವೀಕರಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಟ ರಿಷಬ್ ಶೆಟ್ಟಿ ಭೇಟಿ

Suddi Udaya

ನಡ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿಯಿಂದ ದಿ. ಕೆ ವಸಂತ ಬಂಗೇರರಿಗೆ ನುಡಿನಮನ

Suddi Udaya

ಕಡಿರುದ್ಯಾವರ ಮುಸ್ತಾಫರ ಮನೆಗೆ ನುಗ್ಗಿದ ಕಳ್ಳರು: ರೂ.1.71 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಕಳವು

Suddi Udaya

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯ ವತಿಯಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ದೂರು ಪ್ರಕರಣ : ವಕೀಲರ ತಂಡ ಭೇಟಿ ನೀಡಿದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿಗೆ ಲಭ್ಯವಿರದ ವಿಷಯ: ಉದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ವರದಿ ಮಾಡಿದ ವೆಬ್ ನ್ಯೂಸ್ ಮೇಲೆ ಕೇಸು

Suddi Udaya
error: Content is protected !!