23.7 C
ಪುತ್ತೂರು, ಬೆಳ್ತಂಗಡಿ
April 24, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ವೈಎಸ್ ಬೆಳ್ತಂಗಡಿ ಝೋನ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಬೆಳ್ತಂಗಡಿ : ಎಸ್ ವೈ ಎಸ್ ಬೆಳ್ತಂಗಡಿ ಝೋನ್ ಇದರ ವಾರ್ಷಿಕ ಮಹಾಸಭೆಯು ಫೆ.23ರಂದು ಎಚ್ ಎಮ್ ಮದರಸಹಾಲ್ ಜಾರಿಗೆ ಬೈಲ್ ನಲ್ಲಿ ನಡೆಸಲಾಯಿತು.

ಝೋನ್ ಅಧ್ಯಕ್ಷ ಕಾಸಿಂ ಮುಸ್ಲಿಯರ್ ಮಾಚಾರು ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುದರಿಸ್ ಯಾಸೀನ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಕೆವೈ ಹಂಝ ಮದನಿ ಅಲ್ ಫುರ್ಖಾನಿ ಗುರುವಾಯನಕೆರೆ ದುಃಆ ಆಶೀರ್ವಚನ ಮಾಡಿದರು. ಎಸ್ ವೈ ಎಸ್ ಝೋನ್ ಕಾರ್ಯದರ್ಶಿ ನಝೀರ್ ಪೆರ್ದಾಡಿ ವರದಿ ವಾಚಿಸಿದರು ಕಳೆದ ಎರಡು ವರ್ಷದ ಅವಧಿಯ ಲೆಕ್ಕ ಪತ್ರ ಕೋಶಾಧಿಕಾರಿ ಹಾರಿಸ್ ಕುಕ್ಕುಡಿ ಮಂಡಿಸಿದರು. ಜಿಲ್ಲೆಯಿಂದ ಆಗಮಿಸಿದ ನಾಯಕರಗಳಾದ ಶಾಫಿ ಸಖಾಫಿ ಕೊಕ್ಕಡ ತರಗತಿ ಮಂಡಿಸಿ, ಕಲಂದರ್ ಪದ್ಮಂಜ ರವರು ನೂತನ ಸಮಿತಿ ರಚನೆಗೆ ನೇತೃತ್ವ ನೀಡಿದರು. ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸಾಧಿಕ್ ಮಾಸ್ಟರ್ ಮಲೆಬೆಟ್ಟು ಆಶಂಶ ಮಾತುಗಳನ್ನಾಡಿದರು.

ಎಸ್ ವೈ ಎಸ್ ಬೆಳ್ತಂಗಡಿ ಝೋನ್ ಇದರ 2025 26ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು ನೂತನ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಕನ್ಯಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಝಖ್ ಸಖಾಫಿ ಮಡಂತ್ಯಾರು, ದಅವಾ ಮತ್ತು ಟ್ರೈನಿಂಗ್ ಉಪಾಧ್ಯಕ್ಷರಾಗಿ ಅಯ್ಯೂಬ್ ಮಹ್ಳರೀ ಕಾವಳಕಟ್ಟೆ, ಕಾರ್ಯದರ್ಶಿಯಾಗಿ ಆಶ್ರಫ್ ಮುಂಡಾಜೆ, ಸೋಶಿಯಲ್ ಮತ್ತು ಕಲ್ಚರಲ್ ಕಾರ್ಯದರ್ಶಿಯಾಗಿ ಸಿದ್ದೀಕ್ ಪರಪ್ಪು, ಸಾಂತ್ವನ ಮತ್ತು ಇಸಾಬ ಉಪಾಧ್ಯಕ್ಷರಾಗಿ ಕೆ ವೈ ಇಸ್ಮಾಯಿಲ್ ವೇಣೂರು, ಕಾರ್ಯದರ್ಶಿಯಾಗಿ ಅಝೀಝ್ ಕಾಜೂರು, ಸಂಘಟನಾ ಉಪಾಧ್ಯಕ್ಷರಾಗಿ ಜಮಾಲುದ್ದೀನ್ ಲತೀಫಿ ಲಾಡಿ, ಕಾರ್ಯದರ್ಶಿಯಾಗಿ ಅಶ್ರಫ್ ಎಂ ಎಚ್ ಉಜಿರೆ,ಮೀಡಿಯಾ ಮತ್ತು ಐಟಿ ಕಾರ್ಯದರ್ಶಿಯಾಗಿ ಹಾರಿಸ್ ಕುಕ್ಕುಡಿ ಇವರುಗಳನ್ನು ನೇಮಕ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಏಳು ಸರ್ಕಲ್ ಸಮಿತಿಯ ಕೌನ್ಸಿಲರ್ ಗಳು ಭಾಗವಹಿಸಿದ್ದರು ಮಹಾಸಭೆಗೆ ಹಾಜರಾದ ಸರ್ವರಿಗೂ ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಝಖ್ ಸಖಾಫಿ ಮಡಂತ್ಯಾರು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ವಂದಿಸಿದರು.

Related posts

ಜು.20 ರಿಂದ ಉಜಿರೆ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ನಲ್ಲಿ ಆಷಾಢ ಆಟಿದ ಪರ್ಬ; ದರಕಡಿತ ಮಾರಾಟ

Suddi Udaya

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ವಿಸ್ತರಣೆಗೊಂಡ ಕಲ್ಮಂಜ ಸರಕಾರಿ ಹಿ.ಪ್ರಾ. ಶಾಲೆಯ ಆಟದ ಮೈದಾನ

Suddi Udaya

ಕೊಕ್ಕಡ, ಅರಸಿನಮಕ್ಕಿಯಲ್ಲಿ ಹರೀಶ್ ಪೂಂಜರ ಬಿರುಸಿನ ಪ್ರಚಾರ ಸಭೆ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವರ ಜಾತ್ರೋತ್ಸವಕ್ಕೆ ಚಾಲನೆ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ,

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ಆದೇಶ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

Suddi Udaya
error: Content is protected !!