ಕೊಯ್ಯೂರು: ಕೊಯ್ಯೂರು ಅದೂರು ಪೇರಾಲ್ ಶ್ರೀ ಕೃಷ್ಣ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಮಹಿಳಾ ಭಜನಾ ತಂಡ ಅದೂರು ಪೇರಾಲ್ ಜಂಟಿ ಆಶ್ರಯದಲ್ಲಿ ಭಕ್ತಿಯ ಹೆಜ್ಜೆ ಭಕ್ತರ ಮನದ ಮನೆಗಳತ್ತ ಎಂಬ ನಗರ ಭಜನಾ ಮಂಗಳೋತ್ಸವ ಮತ್ತು ಸತ್ಯ ನಾರಾಯಣ ಪೂಜೆ ಮಾ.1 ರಂದು ರಾತ್ರಿ ಮಂಡಳಿ ವಠಾರದಲ್ಲಿ ನಡೆಯಿತು.

ಬೆಂಗಳೂರು ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ ಹಿಂದು, ಧರ್ಮ ಜಾಗೃತಿ ಮೂಡಿಸಲು ಭಜನಾ ಸಪ್ತಾಹದಂತಹ ಅನೇಕ ಕಾರ್ಯಕ್ರಮದಲ್ಲಿ ಮಕ್ಕಳ ಭಾಗವಹಿಸಿಕೆಯಿಂದ ಸನಾತನ ಧರ್ಮ ಉಳಿಯಲು ಸಾಧ್ಯ ಎಂದು ಹೇಳಿದರು.
ಕೃಷಿಕರಾದ ಪ್ರಚಂಡ ಭಾನು ಭಟ್ ಉಪಸ್ಥಿತರಿದ್ದರು. ಅಮಂತ್ರಿತ ಭಜನಾ ಮಂಡಳಿ ಸದಸ್ಯರಿಂದ ಏಕಕಾಲದಲ್ಲಿ ಕುಣಿತ ಭಜನೆ ನಡೆಯಿತು.
ಕುಣಿತ ಭಜನಾ ಮಂಡಳಿ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಸ್ವಾಗತಿಸಿ, ಲಿಂಗಪ್ಪಗೌಡ ಬೆರ್ಕೆ ನಿರೂಪಿಸಿ , ವಂದಿಸಿದರು. ಭಜನಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸಂಘದ ಸದಸ್ಯರು, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಭಕ್ತರು ಮತ್ತಿತರರಿದ್ದರು.













