ನಾರಾವಿ :ಇಲ್ಲಿಯ ಸತ್ಕಾರ್ ಹೋಟೆಲ್ ಬಳಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರಿಗೆ ಗಾಯಗಳಾದ ಘಟನೆ ಮಾ.2 ರಂದು ನಡೆದಿದೆ
ಘಟನೆ ವಿವರ: ಮಾ.2 ರಂದು ನಾರಾವಿ ಗ್ರಾಮದ ಸತ್ಕಾರ್ ಹೋಟೆಲ್ ಬಳಿ ಕಾರ್ಕಳ-ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಅಟೋರಿಕ್ಷಾ ಚಾಲಕ ರವಿಚಂದ್ರ ರವರು ಅಳದಂಗಡಿ ಕಡೆಯಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಮೇಶ್ ಮೂಲ್ಯ ರವರ ಬಲಕೈ, ಬಲಕಾಲಿಗೆ, ಬಲಬದಿ ಹಣೆಗೆ ತರಚಿದ ಗಾಯ ಹಾಗೂ ಸಹ ಸವಾರ ಮಂಜುನಾಥರವರ ಬಲಕಾಲಿಗೆ ಮುರಿತದ ಗಾಯ ಮತ್ತು ಬಲಕೈಗೆ ತರಚಿದ ಗಾಯ ಉಂಟಾಗಿ ಹೆಚ್ಚು ಗಾಯಗೊಂಡ ಸಹ ಸವಾರ ಮಂಜುನಾಥರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













