26.5 C
ಪುತ್ತೂರು, ಬೆಳ್ತಂಗಡಿ
September 20, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ: ಬೈಕ್ ಗೆ ಡಿಕ್ಕಿ ಹೊಡೆದ ಆಟೋರಿಕ್ಷಾ : ಬೈಕ್ ಸವಾರರಿಗೆ ಗಾಯ

ನಾರಾವಿ :ಇಲ್ಲಿಯ ಸತ್ಕಾರ್‌ ಹೋಟೆಲ್‌ ಬಳಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರರಿಗೆ ಗಾಯಗಳಾದ ಘಟನೆ ಮಾ.2 ರಂದು ನಡೆದಿದೆ

ಘಟನೆ ವಿವರ: ಮಾ.2 ರಂದು ನಾರಾವಿ ಗ್ರಾಮದ ಸತ್ಕಾರ್‌ ಹೋಟೆಲ್‌ ಬಳಿ ಕಾರ್ಕಳ-ನಾರಾವಿ-ಗುರುವಾಯನಕೆರೆ ಸಾರ್ವಜನಿಕ ರಸ್ತೆಯಲ್ಲಿ ಅಟೋರಿಕ್ಷಾ ಚಾಲಕ ರವಿಚಂದ್ರ ರವರು ಅಳದಂಗಡಿ ಕಡೆಯಿಂದ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ರಮೇಶ್ ಮೂಲ್ಯ ರವರ ಬಲಕೈ, ಬಲಕಾಲಿಗೆ, ಬಲಬದಿ ಹಣೆಗೆ ತರಚಿದ ಗಾಯ ಹಾಗೂ ಸಹ ಸವಾರ ಮಂಜುನಾಥರವರ ಬಲಕಾಲಿಗೆ ಮುರಿತದ ಗಾಯ ಮತ್ತು ಬಲಕೈಗೆ ತರಚಿದ ಗಾಯ ಉಂಟಾಗಿ ಹೆಚ್ಚು ಗಾಯಗೊಂಡ ಸಹ ಸವಾರ ಮಂಜುನಾಥರವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ವಿದ್ಯಾರ್ಥಿಗಳ ಸ್ವಾಗತ ಮತ್ತು ಡಾನ್ಸ್ ಸ್ಪರ್ಧೆ-ಡಾನ್ಸ್ ಬ್ಯಾಟಲ್-2024 ಕಾರ್ಯಕ್ರಮ

Suddi Udaya

ಕನ್ಯಾಡಿ ಸೇವಾಭಾರತಿಯಿಂದ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya

ಕೊಯ್ಯೂರು ಬೆಲ್ಡೆ ಗುಂಡ ಶ್ರೀ ಪಂಚಧೂಮವತಿ ವರ್ಷಾವಧಿ ಜಾತ್ರೋತ್ಸವ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Suddi Udaya

ಮಡಂತ್ಯಾರು ಬಸವನಗುಡಿ ಒಕ್ಕೂಟದ ವತಿಯಿಂದ ಬಸವೇಶ್ವರ ದೇವರಿಗೆ ಸಿಯಾಳಭಿಷೇಕ

Suddi Udaya

ಬೆಳಾಲು: ಸ್ಕೂಟರ್‌ಗೆ ಕ್ರೇನ್ ಡಿಕ್ಕಿ ಹೊಡೆದು ಅಪಘಾತ-ಬಳಂಜ ಕಾಪಿನಡ್ಕ ನಿವಾಸಿ ಜಯ ಮೇಸ್ತ್ರೀ ಸ್ಥಳದಲ್ಲೇ ಸಾವು

Suddi Udaya
error: Content is protected !!