25.1 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿವರದಿ

ಪಡಂಗಡಿ: ನವ ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕಣಿಯೂರು ನಿವಾಸಿ ವಿವಾಹಿತ ಮಹಿಳೆಯೋರ್ವರು ಬೆಂಗಳೂರು ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ (23 ) ಮೃತಪಟ್ಟಾಕೆ.

ಪೂಜಾ ಅವರು ವಿದ್ಯಾವಂತೆಯಾಗಿದ್ದು ಉದ್ಯೋಗ ಅರಸಿ ಕಳೆದ 2 ತಿಂಗಳ ಹಿಂದೆ ಬೆಂಗಳೂರಿಗೆ ತೆರಳುವವರಿದ್ದರು. ಅವರನ್ನು ತಮ್ಮ ಸಂಬಂಧಿಕರ ಮನೆ ಬೆಂಗಳೂರಿಗೆ ಪತಿ ಪ್ರಕಾಶ್ ಕಳುಹಿಸಿಕೊಟ್ಟಿದ್ದರು. ಪತಿ ಪ್ರಕಾಶ್ ಬದ್ಯಾರು ಬರಾಯ ತಮ್ಮ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು.

ಪೂಜಾ ಅವರು ಮೂಲತಃ ಕಣಿಯೂರು ಗ್ರಾಮದ ನೆಲ್ಲಿ ಬಾಕಿಮಾರು ಮನೆಯ ವಾರಿಜಾ ಹಾಗೂ ಸೇಸಪ್ಪ ಪೂಜಾರಿ ದಂಪತಿy ಪುತ್ರಿಯಾಗಿದ್ದು 10 ತಿಂಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದಾರು. ಮೃತಳ ಸಾವಿನ ಬಗ್ಗೆ ಸಂಶಯಾಸ್ಪದವಾಗಿದೆ ಎಂದು ತಾಯಿ, ತಂದೆ ಅಭಿಪ್ರಾಯ ಪಟ್ಟು ಮನೆಯಲ್ಲೆ ಅಂತ್ಯಕ್ರಿಯೆ ನಡೆಸಿದ್ದರು.

ಬೆಂಗಳೂರು ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ಚಲಿಸುತ್ತಿದ್ದ ರೈಲಿನಲ್ಲಿ ಸುರಕ್ಷಿತ ಹೆರಿಗೆ

Suddi Udaya

ಮದ್ದಡ್ಕ: ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ಡಿಕ್ಕಿ: ಚಾಲಕರು ಪ್ರಾಣಾಪಾಯದಿಂದ ಪಾರು

Suddi Udaya

ಡಿ.5 : ನೇತ್ರಾನಗರ ಧರ್ಮಸ್ಥಳದಲ್ಲಿ “ಯಾತ್ರಾ ಆತಿಥ್ಯ” ಶುಭಾರಂಭ: ಪ್ರವಾಸಿಗರಿಗೆ, ಯಾತ್ರಾರ್ಥಿಗಳಿಗೆ ಅನುಕೂಲ, ಸುಮಾರು 108 ರೂಮ್ಸ್

Suddi Udaya

ಎಸ್. ಡಿ. ಎಮ್ ಪ.ಪೂ. ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಯ್ಯೂ ರು:ಪೋಷಕರ ಸಭೆ

Suddi Udaya

ಎಸ್.ಐ.ಆರ್ ಮಾಹಿತಿಗಾಗಿ ನೇಮಿಸಲ್ಪಟ್ಟ ಬೂತ್ ಮಟ್ಟದ ಅಧಿಕಾರಿಗಳ ವಿಳಂಬ ನೀತಿಯ ಬಗ್ಗೆ ಬೆಳ್ತಂಗಡಿ ಎಸ್‌ಡಿಪಿಐ ಯಿಂದ ತಹಸೀಲ್ದಾರ್ ದೂರು

Suddi Udaya
error: Content is protected !!