September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವಿದ್ವತ್ ಪಿಯು ಕಾಲೇಜಿನಲ್ಲಿ ಸುನೀತ ವಿಲಿಯಮ್ಸ್ ರವರಿಗೆ ಗೌರವ ಸಮರ್ಪಣೆ

ಬೆಳ್ತಂಗಡಿ: ಭಾರತೀಯ ಸಂಜಾತೆ ಸುನೀತ ವಿಲಿಯಮ್ಸ್ ಹಾಗೂ ಅಮೆರಿಕದ ಬುಚ್ ವಿಲ್ಮೋರ್ ರವರು ಬಾಹ್ಯಾಕಾಶ ದಿಂದ ನಿನ್ನೆ ಬೆಳಿಗ್ಗೆ 3.27 ಕ್ಕೆ ಭೂಮಿಗೆ ಬಂದಿಳಿದ ಐತಿಹಾಸಿಕ ಸಾಹಸದ ಕ್ಷಣದ ದೃಶ್ಯಗಳನ್ನು ಎಲ್ಲಾ ಮಕ್ಕಳಿಗೂ ತೋರಿಸಿ , ಸಾಧನೆ ತೋರಿದ ಈ ಸಾಧಕರಿಗೆ ಸಮಸ್ತ ವಿದ್ವತ್ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿ ಗೌರವ ಸೆಲ್ಯೂಟ್ ಸಮರ್ಪಣೆ ಮಾಡಿ, ಮಾ.20 ರಮದು ನಡೆದ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಕೊಂಡಾಡಿದರು.

ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಕ್ಕಳು ಅಭ್ಯಾಸ ಮಾಡುವ ಭೌತಶಾಸ್ತ್ರ ದ ಥಿಯರಿ ಹೇಗೆ ಉಪಯೋಗಿಸಲ್ಪಡುತ್ತದೆ , ಭೌತಶಾಸ್ತ್ರ ವಿಷಯ ತಜ್ಞ, ಅತುಕುರಿ ನರೇಶ್ ವಿವರಿಸಿದರೆ, ರಸಾಯನ ಶಾಸ್ತ್ರ ದಲ್ಲಿ ಮಕ್ಕಳು ಕಲಿಯುವ ಥಿಯರಿಗಳು ಹೇಗೆ ಉಪಯೋಗಿಸಲ್ಪಡುತ್ತವೆ ಎಂಬುದನ್ನು, ರಸಾಯನಶಾಸ್ತ್ರ ವಿಷಯತಜ್ಞ, ಪ್ರಥಾಪ್ ದೊಡ್ಡಮನೆ ಯವರು ವಿವರಿಸಿದರು. ವೈಜ್ಞಾನಿಕ ಕುತೂಹಲ ಮೂಡಿಸುವ ಪ್ರಮುಖ ಉದ್ದೇಶ ಹೊಂದಿರುವ ಇನ್ಸ್ಪೈರ್ ವಿದ್ವತ್ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿತ್ತು.

ನಂತರ ಗ್ರೂಪ್ ಕ್ಯಾಪ್ಟನ್ ರಾಹುಲ್ ಸ್ವಾಮಿ ಗೌರವ ವಂದನೆಯ ಕಾರ್ಯಕ್ರಮ ನೆರವೇರಿಸಿದರು.

ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ ಯವರು ಸುನೀತಾ ವಿಲಿಯಮ್ಸ್ ರವರ ಸಾಹಸಗಾಥೆಯ ವಿವರ ನೀಡಿ, ಪ್ರತಿಭಾವಂತರಿಗಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು . ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು. ಕು. ಅನುಶ್ರೀ, ಜೀವಶಾಸ್ತ್ರ ಉಪನ್ಯಾಸಕಿ, ಕಾರ್ಯಕ್ರಮ ನಿರೂಪಿಸಿದರು.

Related posts

ಬಿಜೆಪಿ‌ ಅಲ್ಪಸಂಖ್ಯಾತ ಮೋರ್ಚಾದಿಂದ ಶಾಸಕರ ಹುಟ್ಟುಹಬ್ಬ ಆಚರಣೆ

Suddi Udaya

ಉಜಿರೆ :ಶ್ರೀ ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಲೋಕಸಭಾ ಚುನಾವಣೆ : ನಾಳೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Suddi Udaya

ಸಿಎಸ್ಇಇಟಿ ಪರೀಕ್ಷೆಯಲ್ಲಿ ಎಕ್ಸೆಲ್ ಅಮೋಘ ಸಾಧನೆ ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ

Suddi Udaya

ಮಾ.19: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಮಾಯಣ ತರಗತಿ ಆರಂಭ

Suddi Udaya

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

Suddi Udaya
error: Content is protected !!