22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ : ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ. ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಭಾಗಿ

ಕಳಿಯ ಗ್ರಾಮ ಪಂಚಾಯತ್ ನ ಕಳಿಯ ಮತ್ತು ನ್ಯಾಯತರ್ಪು ಗ್ರಾಮದ ಐದು ಬೂತನ್ನೊಳಗೊಂಡ ಪಂಚಾಯತ್ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ ಕಳಿಯ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರೂ,ಕಳಿಯ ಸಿ.ಎ.ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿದ್ದ ಅಡೂರು ಸತೀಶ್ ನಾಯ್ಕ್ ನಾಳ ಆಯ್ಕೆ ಆಗಿದ್ದಾರೆ.


ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಆಗಮಿಸಿದ್ದರು. ಹಾಗೂ ಉಪಾದ್ಯಕ್ಷರುಗಳಾಗಿ ಪ್ರದೀಪ್ ಕುಮಾರ್ ಪೇರಾಜೆ, ರಶೀದ್ ಪರಿಮ, ನೇವಿಲ್ ಮೊರಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಗೌಡ ಕೆರೆಕೋಡಿ, ಶ್ರೀಮತಿ ಶ್ವೇತಾ, ನೌಷದ್ ಜಿ, ಕಾರ್ಯದರ್ಶಿಗಳಾಗಿ ಶ್ರೀಮತಿ ಪುಷ್ಪಾ ಎಸ್ ನಾಯ್ಕ, ಸುಮಲತಾ ಬಟ್ಟೆಮಾರು, ನಾಸಿರ್ ನಡತೊಟ್ಟು ಆಯ್ಕೆಯಾದರು.

ಬೂತ್ ಸಮಿತಿಯ ಅಧ್ಯಕ್ಷರುಗಳಾಗಿ ಕಳಿಯ ಒಂದನೇ ಬ್ಲಾಕ್ ಗೆ ರಹಿಮಾನ್ ಮಾಸ್ಟರ್, ಎರಡನೇ ಬ್ಲಾಕ್ ಗೆ ಸಿದ್ದೀಕ್ ಜಿ ಎಚ್, ಮೂರನೇ ಬ್ಲಾಕ್ ಗೆ ಸೋಮನಾಥ್ ಇಡ್ಯ ಹಾಗೂ ನ್ಯಾಯತರ್ಪು ಗ್ರಾಮದ ಒಂದನೇ ಬ್ಲಾಕ್ ಗೆ ಹರೀಶ್ ನಾಳ, ಎರಡನೇ ಬ್ಲಾಕ್ ಗೆ ಆಸಿಫ್ ಪಳ್ಳಾದೆ ಆಯ್ಕೆಯಾದರು. ಸಭೆಯು ಪರಪ್ಪು ನೇವಿಲ್ ಮೊರಾಸ್ ಮನೆಯಲ್ಲಿ ನಡೆಯಿತು.

ಸಭೆಯಲ್ಲಿ ಅಬ್ಬುಲ್ ಕರೀಮ್, ರಾಘವ ಎಚ್,ಸತೀಶ್ ನಾಯ್ಕ್ ,ಲತೀಫ್ ಪರಿಮ, ಇಸ್ಮಾಯಿಲ್ ಪಳ್ಳಾದೆ, ನೇವಿಲ್ ಮೊರಾಸ್, ಶ್ರೀಮತಿ ಮರೀಟಾ ಪಿಂಟೋ, ಶ್ರೀಮತಿ ಮೋಹಿನಿ, ಶ್ರೀಮತಿ ಪುಷ್ಪಾ,ಸೋಮನಾಥ ಇಡ್ಯ,ಉಮರಬ್ಬ ಜಾರಿಗೆಬೈಲು, ಬೊಮ್ಮಣ್ಣ ಗೌಡ, ಆಸಿಫ್ ಪಳ್ಳಾದೆ, ರಹಿಮಾನ್ ಮಾಸ್ಟರ್, ಹರೀಶ್ ನಾಳ ಹಾಜರಿದ್ದರು.

Related posts

ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಸೌಖ್ಯವನ ಪರೀಕದ ಬ್ರಹ್ಮಕಲಶೋತ್ಸವದ ಕಛೇರಿ ಉದ್ಘಾಟನೆ

Suddi Udaya

ಫೆ.8: ಉಜಿರೆ-ಬೆಳ್ತಂಗಡಿ ಟಿಬಿ ಕ್ರಾಸ್‌ನಲ್ಲಿ ಮಹಾಗಣಪತಿ ಗ್ರಾನೈಟ್ಸ್ & ಟೈಲ್ಸ್ ಶುಭಾರಂಭ

Suddi Udaya

ಆರ್‌ಸಿಬಿ ಸಂಭ್ರಮಾಚರಣೆ: ಇಳಂತಿಲ ಮೂಲದ ಯುವತಿ ಮೃತ್ಯು

Suddi Udaya

ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ: ಗೇರುಕಟ್ಟೆಯ ಅದೀಲ್ ರವರಿಗೆ ಕುಮಿತೆಯಲ್ಲಿ ಚಿನ್ನದ ಪದಕ

Suddi Udaya

ಚಾರ್ಮಾಡಿ ಗ್ರಾ.ಪಂ. ಮಟ್ಟದ ಸುಸ್ಥಿರ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ತರಬೇತಿ ಕಾರ್ಯಕ್ರಮ, ಭಿತ್ತಿಪತ್ರ ಬಿಡುಗಡೆ

Suddi Udaya

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ

Suddi Udaya
error: Content is protected !!