September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

“ಮಾಯವಾಗುತ್ತಿದೆ ಮಚ್ಚಿನ ನೆರೋಲ್ಪಲ್ಕೆ ಬಸ್ ತಂಗುದಾಣ”

ಮಚ್ಚಿನ: “ಮಾಯವಾಗುತ್ತಿದೆ ಮಚ್ಚಿನ ಗ್ರಾಮದ ನೆರೋಲ್ಪಲ್ಕೆ ಬಸ್ ತಂಗುದಾಣ…” ಹೌದು ಮಚ್ಚಿನ ಗ್ರಾಮದ ನೆರೋಲ್ಪಲ್ಕೆ ಯಲ್ಲಿ ಸುಮಾರು ವರ್ಷಗಳ ಹಿಂದೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಗೊಂಡಿದ್ದರೂ ಈಗ ಮಾತ್ರ ಅದು ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿದೆ.

ಬಿಸಿಲು, ಗಾಳಿ ಮಳೆಗೆ ಜನರು ಬಸ್ಸಿಗಾಗಿ ರಸ್ತೆ ಬದಿಯ ಮರದ ಅಡಿಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಸುತ್ತವು ಗಿಡಗಂಟಿ ಪೊದೆಗಳಿಂದ ಮುತ್ತಿಹೋಗಿವೆ. ಈ ಬಸ್ ತಂಗುದಾಣಕ್ಕೆ ಹೋಗಲು ಸರಿಯಾದ ದಾರಿಯು ಇಲ್ಲ ಚರಂಡಿಗಳನ್ನು ತೆಗೆದು ಮೋರಿಯು ಹಾಕದೆ ಚರಂಡಿ ಹಾರಿ ಬಸ್ಸಿಗೆ ಓಡೋ ಸ್ಥಿತಿಯಲ್ಲಿದೆ. ಈ ಸ್ಥಳದಲ್ಲಿ ಸುತ್ತುಮುತ್ತಲು ಹಲವಾರು ಮನೆಗಳಿದ್ದು ಶಾಲಾ ಮಕ್ಕಳು ಬಸ್ಸಿಗಾಗಿ ರಸ್ತೆ ಬದಿಯಲ್ಲಿ ನಿಲ್ಲುವಂತ ಪರಿಸ್ಥಿತಿಯಲ್ಲಿದೆ. ಇನ್ನೇನು ಮಳೆಗಾಲ ಪ್ರಾರಂಭವಾದರೆ ಸಿಡಿಲು ಮಳೆಗೆ ರಸ್ತೆ ಬದಿಯಲ್ಲಿ ನಿಲ್ಲುವಂತಹ ಸ್ಥಿತಿಯಲ್ಲಿದೆ. ರಾತ್ರಿ ಹೊತ್ತು ಸರಿಯಾದ ದಾರಿದೀಪವು ಇಲ್ಲದೆ ಕತ್ತಲೆಯಲ್ಲಿ ಬಸ್ಸಿಗಾಗಿ ಕಾಯುವಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಬಸ್ ನಿಲ್ದಾಣದ ವ್ಯವಸ್ಥೆಯನ್ನು ಒದಗಿಸುವಂತೆ ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.

ಈ ಭಾಗದ ಸಾರ್ವಜನಿಕ ಬಸ್ ನಿಲ್ದಾಣವು ಎಲ್ಲರಿಗೂ ಅವಶ್ಯವಾಗಿದೆ. ಆದರೆ ಬಸ್ ನಿಲ್ದಾಣಕ್ಕೆ ಹೋಗಲು ಸರಿಯಾದ ದಾರಿ ಇಲ್ಲ. ಬಸ್ ನಿಲ್ದಾಣಕ್ಕೆ ನಾಮಫಲಕ, ಲೈಟ್ ವ್ಯವಸ್ಥೆ ಇನ್ನಿತರ ಎಲ್ಲಾ ಸೌಕರ್ಯಗಳೊಂದಿಗೆ ಒಂದು ಸುಂದರ ಬಸ್ ನಿಲ್ದಾಣ ಮಾಡುವಂತೆ ನಮ್ಮೆಲ್ಲರ ಒತ್ತಾಯ.
-ಅನಂತಕೃಷ್ಣ ಭಟ್ ಕುಕ್ಕಿಲ

Related posts

ಡಿ. 02: ಉಜಿರೆಯಲ್ಲಿ ಜಿಲ್ಲಾಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆ

Suddi Udaya

ಪುದುವೆಟ್ಟು: ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆ ವಿಶ್ವ ಯೋಗ ದಿನಾಚರಣೆ

Suddi Udaya

ಪೆರಿಂಜೆಯ ಶಾಲೆಯಲ್ಲಿ ಉಜಿರೆಯ ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

Suddi Udaya

ನಿಟ್ಟಡೆ: ಬೀಯದಡಿ ನಿವಾಸಿ ಜಾನಕಿ ನಿಧನ

Suddi Udaya

ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಲಾರಿ ಪೊಲೀಸರ ವಶ: ತಹಶೀಲ್ದಾರ್ ತಂಡ ಕಾರ್ಯಾಚರಣೆ

Suddi Udaya

ಬೆಳ್ತಂಗಡಿ ಬಸದಿಯಲ್ಲಿ ನಮೋಕಾರ ಮಹಾಮಂತ್ರ ಪಠಣ

Suddi Udaya
error: Content is protected !!