September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಹಲ್ಗಾಮ್ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ : ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ

ಬೆಳ್ತಂಗಡಿ:ಬಲಿಷ್ಠ ಭಾರತದ ರಕ್ಷಣಪಡೆಗೆ ಸವಲಾಗಿ ನಿಂತಿರುವ ಪಹಲ್ಗಾ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ. 28 ಅಮಾಯಕರನ್ನು ಗುಂಡಿಕ್ಕಿ ಕೊಂದು ಕ್ರೌರ್ಯ ಮೆರೆದ ಉಗ್ರಗಾಮಿಗಳಿಗೆ ಮತ್ತು ಅದರ ಹಿಂದಿರುವ ಶಕ್ತಿಗಳಿಗೆ ಶಾಪ ಮತ್ತು ಖಂಡನೆ ಇರಲಿ ಎಂದು ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.


ಇಂತಹ ಘಟನೆಗಳು ಚುನಾವಣಾ ಪೂರ್ವದಲ್ಲಿ ಘಟಿಸಲು ಕಾರಣವೇನು ಕೆಲವೇ ಜನ ಉಗ್ರರು ರಾಷ್ಟ್ರದ ಸುಂದರ ತಾಣಗಳಿಗೆ ದೇಶ ವಿದೇಶಗಳಿಂದ ಬರುವ ಯಾತ್ರಿಗಳನ್ನು ಗುರಿಯಾಗಿಸಿ ಹತ್ಯೆ ಮಾಡುವುದು ನಾಚಿಕೆಗೇಡಿನ ವಿಷಯ. ಪಹಲ್ ಗಾಮ್ ಅನ್ನುವ ಅತ್ಯಂತ ಸುಂದರವಾದ ಸೂಕ್ಷ್ಮ ಪ್ರದೇಶಕ್ಕೆ ದಿನನಿತ್ಯ ಸಾವಿರಾರು ಯಾತ್ರಿಗಳು ಬರುತ್ತಿದ್ದರೂ, ಯಾವುದೇ ರಕ್ಷಣೆ ಇಲ್ಲ ಅನ್ನುವುದು ನಾಚಿಕೆಗೇಡಿನ ಪ್ರಸಂಗ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಕಾಶ್ಮೀರದಲ್ಲಿ ಇರುವ ಲಕ್ಷಾಂತರ ರಕ್ಷಣಾ ಪಡೆ ಗುಪ್ತಚರಪಡೆಗಳು ಎಲ್ಲಿ ಹೋಗಿತ್ತು , ಕೇಂದ್ರಾಡಳಿತದ ಉಸ್ತುವಾರಿ ವಹಿಸಿದ್ದ ಗವರ್ನರ್ ರವರು ಏನು ಮಾಡುತ್ತಿದ್ದರು ಅನ್ನುವ ಪ್ರಶ್ನೆ ಎದ್ದಿದೆ. ದೇಶಕ್ಕೆ ಚುನಾವಣೆಗಿಂತ ಮುಖ್ಯ ಪ್ರಜೆಗಳ ಪ್ರಾಣ ರಕ್ಷಣೆ ಅನ್ನುವುದನ್ನು ಈಗಲಾದರೂ ಅಧಿಕಾರದಲ್ಲಿರುವ ಎಲ್ಲರೂ ಗಮನಹರಿಸಬೇಕು. ಹಿಂದೂ ಮುಸ್ಲಿಂ ಅಂತ ಬೊಬ್ಬೆ ಹೊಡೆಯುವ ಮೀಡಿಯಾಗಳು ಸತ್ತ 28 ಜನರ ಪೈಕಿ 15 ಜನರು ಮುಸ್ಲಿಂ ಬಂಧುಗಳು ಅನ್ನೋದನ್ನು ನೆನಪಿಡಬೇಕು. ಎಷ್ಟೋ ಜನರ ಬಲಿದಾನವಾದ ಮೇಲೆ, ದೇಶಕ್ಕೆ ಆತ್ಮಗಾಥ ನೀಡಿದವರನ್ನು ಸುಮ್ಮನೆ ಬಿಡುವುದಿಲ್ಲ ಉಗ್ರರನ್ನು ಸಭೆ ಬಡಿಯುವೆವು ಅನ್ನುವ ವೀರಾ ವೇಷದ ಅಗತ್ಯ ಇದೆಯೇ, prevention is better than cure ಏನಾದರೂ ಕಠಿಣ ಕ್ರಮ ತೆಗೆದುಕೊಳ್ಳುವುದಿದ್ದರೆ ಮಾಡಿ ತೋರಿಸಿ. ಪ್ರತೀ ದಾಳಿಗಳ ಹಿಂದೆ ಅನುಮಾನದ ಹುತ್ತ ಖಂಡಿತ ಇದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಸಿಯೋನ್ ಆಶ್ರಮದಲ್ಲಿ ಹೊಸವರ್ಷ ಸಂಭ್ರಮ ಹಾಗೂ ಸ್ನೇಹಭೋಜನ ಕಾರ್ಯಕ್ರಮ

Suddi Udaya

ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯಿಂದ ಪೂರ್ವ ತಯಾರಿ ಸಭೆ

Suddi Udaya

ನೆರಿಯ : ಬೆಂಕಿ ತಗುಲಿ ಹಾನಿಯಾದ ಮನೆಗೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯಿಂದ ಭೇಟಿ

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya

ಹರೀಶ್ ಪೂಂಜರ ಪರ ಚುನಾವಣಾ ಪ್ರಚಾರಕ್ಕೆ ಮುಂಬೈ ಉದ್ಯಮಿ ಸುರೇಶ್ ಪೂಜಾರಿ

Suddi Udaya

ಉಜಿರೆ ದುರ್ಗಾ ಮೊಬೈಲ್‌ಗೆ ಧರ್ಮದರ್ಶಿ ಹರೀಶ್ ಆರಿಕೋಡಿ ಭೇಟಿ

Suddi Udaya
error: Content is protected !!