September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳೆ(ಎ.27): ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಯುವ ಬಂಟರ ಹಾಗೂ ಮಹಿಳಾ ಬಂಟರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಎ.27 ರಂದು ಗುರುವಾಯನಕೆರೆಯ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಈ ಕ್ರೀಡೋತ್ಸವದಲ್ಲಿ ಪಥಸಂಚಲನವು ವಿಶೇಷ ಆಕರ್ಷಣೆಯಾಗಿದ್ದು, ಬೆಳಿಗ್ಗೆ 9 ಗಂಟೆಗೆ ನವಶಕ್ತಿ ಕ್ರೀಡಾಂಗಣದಲ್ಲಿ 9 ವಲಯಗಳ ಕ್ರೀಡಾಳುಗಳು ಮತ್ತು ಬಂಟ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಸ್ತುಬದ್ಧ ಮತ್ತು ಆಕರ್ಶಕವಾಗಿ ಪಥ ಸಂಚಲನ ನಡೆಸಿಕೊಟ್ಟ ತಂಡಗಳಿಗೆ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡ ವಲಯಗಳಿಗೆ ಬಹುಮಾನ ನೀಡಲಾಗುತ್ತದೆ. ಕ್ರೀಡೋತ್ಸವದಲ್ಲಿ 6 ವರ್ಷದ ಒಳಗಿನ ಬಾಲಕ/ಬಾಲಕಿಯರಿಗೆ 50 ಮೀ ಓಟ, ಚೆಂಡು ಎಸೆತ, ಕಪ್ಪೆ ಜಿಗಿತ, 12 ವರ್ಗದ ಒಳಗಿನ ಬಾಲಕ/ಬಾಲಕಿಯರಿಗೆ 80 ಮೀ ಓಟ, ಚೆಂಡು ಎಸೆತ, ಲಿಂಬೆ ಚಮಚ, 17 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ 100, 200, 40 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (18 ರಿಂದ 40 ವರ್ಷ) 100ಮೀ ಓಟ, 200ಮೀ ಓಟ, ಗುಂಡೆಸೆತ, 60 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (41ರಿಂದ 60ವರ್ಷ) 100ಮೀ ಓಟ, 200ಮೀ ವೇಗದ ನಡಿಗೆ, ಗುಂಡೆಸೆತ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ (ಪುರುಷರು/ ಮಹಿಳೆಯರು): 100 ಮೀ ವೇಗದ ನಡಿಗೆ, ಗುಂಡೆಸೆತ, ಪುರುಷರಿಗೆ ವಾಲಿಬಾಲ್ (6+1), ಮಹಿಳೆಯರಿಗೆ ತ್ರೋಬಾಲ್ (9+1), ಹಗ್ಗ ಜಗ್ಗಾಟ (9+2) ಇರುವುದು. ವಿಜೇತರಿಗೆ ದೇವು ಪೂಂಜ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಂಟರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ತೆಕ್ಕಾರು: ಸರಳಿಕಟ್ಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮಹಮ್ಮದ್ ಫಯಾಜ್ ರವರಿಂದ ಲ್ಯಾಪ್ ಟಾಪ್ ಕೊಡುಗೆ

Suddi Udaya

ಹತ್ಯಡ್ಕ: ಹೊಸ್ತೋಟ ನಿವಾಸಿ, ಯಕ್ಷಗಾನ ಕಲಾವಿದ ಅಂತರ ದಿನೇಶ್ ಭಟ್ ನಿಧನ

Suddi Udaya

ಬೆಳ್ತಂಗಡಿ: ಜಾಮೀನು ಅರ್ಜಿ ಸಲ್ಲಿಸಿದ ಚಿನ್ನಯ್ಯ ಪರ ವಕೀಲರು

Suddi Udaya

ಬೆಳಾಲು ಮುಖ್ಯರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

Suddi Udaya

ಶಿಶಿಲ: ಉಮ್ಮಂತಿಮಾರು ಕಿಂಡಿ ಅಣೆಕಟ್ಟು ಹಾಗೂ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ರೂ.2.50 ಕೋಟಿ ಅನುದಾನ ಮಂಜೂರು: ಶಾಸಕ ಹರೀಶ್ ಪೂಂಜ

Suddi Udaya

ಐಪಿಎಲ್ ಪಂದ್ಯಾಟದಲ್ಲಿ ಹರೀಶ್ ಪೂಂಜರ ಭಾವಚಿತ್ರ ಪ್ರದಶಿ೯ಸಿದ ಅಭಿಮಾನಿಗಳು: ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್

Suddi Udaya
error: Content is protected !!