26.2 C
ಪುತ್ತೂರು, ಬೆಳ್ತಂಗಡಿ
June 8, 2026
Uncategorized

ಆಪರೇಷನ್ ಸಿಂಧೂರ: ಉಜಿರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಉಜಿರೆ: ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಮೇ 7ರ ಮಧ್ಯರಾತ್ರಿ ಪ್ರತೀಕಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ಉಜಿರೆಯ ಸರ್ಕಲ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಭಾರತೀಯ ಸೇನೆಗೆ ಜಯ ಘೋಷಗಳನ್ನು ಕೂಗಿ, ಪಟಾಕಿಯನ್ನು ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪಹಲ್ಗಮ್ ನಲ್ಲಿ ನಡೆದ ಅಮಾನುಷ ಕೃತ್ಯ ನೇರವಾಗಿ ಪಾಕಿಸ್ತಾನದಿಂದ ಪ್ರಾಯೋಗಿಕವಾದಂತಹ ಹತ್ಯೆ. ಸಂಪೂರ್ಣ ಭಾರತ ಸರಿಯಾದ ಉತ್ತರಕ್ಕಾಗಿ ಕಾತುರದಿಂದ ಕಾಯುತ್ತಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂಧೂರದ ಮೂಲಕ ಉಗ್ರರ ಒಂಬತ್ತು ತರಬೇತಿ ತಾಣಗಳನ್ನು ದ್ವ0ಸಮಾಡುವುದರ ಮೂಲಕ ತಕ್ಕ ಉತ್ತರವನ್ನು ನೀಡಿದೆ ಎಂದರು.

ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಮಾತನಾಡಿ, ಉಗ್ರರು ಮಹಿಳೆಯರ ಎದುರು ಹೇಯ ಕೃತ್ಯವನ್ನು ಮಾಡುವ ಮೂಲಕ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ಪ್ರಧಾನ ಮಂತ್ರಿ ಹಾಗೂ ಭಾರತೀಯ ಸೇನೆ ಆಪರೇಷನ್ ಸಿಂಧೂರದ ಮೂಲಕ ಕೊಟ್ಟಿರುವಂತಹದ್ದು ಬಹಳ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ರವೀಂದ್ರ ಶೆಟ್ಟಿ ಬಳಂಜ, ಉದಯ್ ಚಿಕನ್ ಸೆಂಟರ್ ನ ರಾಮಚಂದ್ರ ಶೆಟ್ಟಿ, ಅಜಯ್ ಶೆಟ್ಟಿ, ಉಜಿರೆ ಮಹಾಲಕ್ಷ್ಮೀ ಫ್ಯಾನ್ಸಿ ಮಾಲಕ ಭರತ್, ಪದ್ಮಶ್ರೀ ಎಂಟರ್ ಪ್ರೈಸಸ್ ನ ಮಾಲಕ ಪದ್ಮನಾಭ ಶೆಟ್ಟಿಗಾರ್, ತ್ರಿಶುಲ್, ರಾಜೇಶ್, ಪಂಚಾಯತ್ ಸದಸ್ಯರಾದ ಗುರುಪ್ರಸಾದ್, ಸವಿತಾ, ಸಂಧ್ಯಾ, ಪ್ರಮೀಳಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕಿನ ಅಲ್ಲಲ್ಲಿ ಮಳೆ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ ಮಕ್ಕಳಿಗೆ ಪಿಂಕ್ (ಸಖೀ) ಬೂತ್ ನ ಪರಿಕಲ್ಪನೆಯ ಪಾಠ

Suddi Udaya

ಅಂಡೆತಡ್ಕ ಸರಕಾರಿ ಉನ್ನತಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ತಂಡವು ಕುವೆಟ್ಟು ಸ.ಉ. ಹಿ. ಪ್ರಾ. ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಸತತವಾಗಿ ಮೂರನೇ ಬಾರಿ ದ್ವಿತೀಯ ಸ್ಥಾನ

Suddi Udaya

ತ್ರೀ ಸ್ಟಾರ್ ವೈನ್ ಶಾಪ್ ಗೆ ನುಗ್ಗಿದ ಕಳ್ಳರು

Suddi Udaya

ಪ್ರೇರಣಾ ಹೆಗ್ಗಡೆ ವಾಹಿನಿ ಅಸ್ತಿತ್ವಕ್ಕೆ

Suddi Udaya

ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ರಾಧಾಕೃಷ್ಣ ಹೊಳ್ಳ ನಿಧನ

Suddi Udaya
error: Content is protected !!