September 6, 2026
Uncategorized

ನರೇಗಾ ಮತ್ತು ತೆರಿಗೆ ವಸೂಲಾತಿಯಲ್ಲಿ ಗುರಿ ಸಾಧನೆ ಮಾಡಿದವರಿಗೆ ಸನ್ಮಾನ

ಬೆಳ್ತಂಗಡಿ ತಾಲೂಕು ಪಂಚಾಯತಿಯಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರೇಗಾ ಮತ್ತು ತೆರಿಗೆ ವಸೂಲಾತಿಯಲ್ಲಿ ಗುರಿ ಸಾಧಿಸಿದ ಗ್ರಾಮ ಪಂಚಾಯತಿಗಳನ್ನು ಪ್ರಶಂಸಾ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಕಳೆದ ಮಾರ್ಚ್ ತಿಂಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ರವರು ನಿಗದಿತ ಗುರಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು ಸೂಚಿಸಿದ್ದರು.
ಕಳೆದ ವರ್ಷ ನರೇಗಾ ಯೋಜನೆಯಲ್ಲಿ 17555 ಮಾನವ ದಿನಗಳನ್ನು ಸೃಜಿಸಿದ ಬಂದಾರು ಮತ್ತು 15591 ಮಾನವ ದಿನಗಳನ್ನು ಸೃಜಿಸಿದ ಚಾರ್ಮಾಡಿ ಹಾಗೂ 2024-25ರ ಸಾಲಿನಲ್ಲಿ ಹಿಂದಿನ ಸಾಲಿನ ಬಾಕಿ ಸೇರಿ ಶೇ. 100 ತೆರಿಗೆ ವಸೂಲಿ ಮಾಡಿದ್ದ ನಾವೂರು ಸುಲ್ಕೇರಿ ಗ್ರಾಮ ಪಂಚಾಯತಿಗಳಿಗೆ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.


ನರೇಗಾ ಯೋಜನೆಯಡಿ 100% ಗುರಿ ಸಾಧಿಸಿದ ಕಳಿಯ ಮರೋಡಿ ಕೊಯ್ಯುರು ಕಲ್ಮoಜ ಅರಸಿನಮಕ್ಕಿ ಹಾಗೂ 2024-25ರ ಸಾಲಿನ ತೆರಿಗೆಗಳ ಬೇಡಿಕೆಯಲ್ಲಿ 100% ತೆರಿಗೆ ವಸೂಲಿ ಮಾಡಿದ ಅಳದಂಗಡಿ ಅಂಡಿಂಜೆ, ಆರಂಬೋಡಿ, ಬಳಂಜ, ಬಂದಾರು, ಬೆಳಾಲು,ಬಾರ್ಯ, ಚಾರ್ಮಾಡಿ, ಇಳಂತಿಲ, ಇಂದಬೆಟ್ಟು, ಕಳಿಯ, ಕಲ್ಮಂಜ,ಕುಕ್ಕೇಡಿ ಕಾಶಿಪಟ್ನ, ಮಚ್ಚಿನ, ಮಡಂತ್ಯಾರು,ಮುಂಡಾಜೆ ಮಾಲಾಡಿ, ಮಲವಂತಿಗೆ, ಮರೋಡಿ, ಮೇಲಂತಬೆಟ್ಟು, ಮಿತ್ತಬಾಗಿಲು, ನಡ, ನಾರಾವಿ, ನೆರಿಯಾ, ನಿಡ್ಲೆ, ಪಡಂಗಡಿ, ಪಟ್ರಮೆ, ಶಿರ್ಲಾಲು,ತಣ್ಣೀರುಪಂತ, ತೆಕ್ಕಾರು, ಉಜಿರೆ, ವೇಣೂರು ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು
ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿದರು.

ಕಳೆದ ಸಾಲಿನ ಕನ್ನಡ ರಾಜ್ಯೋತ್ಸವದ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಜಯಾನಂದರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಕಚೇರಿ ಅಧೀಕ್ಷಕ ಡಿ. ಪ್ರಶಾಂತ್ ಬಳಂಜ, ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಪ್ರಭಾರ ಸಹಾಯಕ ನಿರ್ದೇಶಕಿ (ನರೇಗಾ) ಶ್ರೀಮತಿ ಸಫನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಿತ್ತಬಾಗಿಲು ಗ್ರಾಮ ಪಂಚಾಯತ್ ಪ್ರಭಾರ ಪಂ. ಅ. ಅಧಿಕಾರಿ ಮೋಹನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು

Related posts

ಇಳಂತಿಲ ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ಯವರ ಪರವಾಗಿ ಮನೆ ಮನೆ ಭೇಟಿ ಅಭಿಯಾನ

Suddi Udaya

ಮಾ.10 : ಗುರುವಾಯನಕೆರೆ ಶಾರದಾ ನಗರ ಗೆಳೆಯರ ಬಳಗದ ವೇದಿಕೆ ಬಳಿ ಹಿರಿಯಡಕ ಮೇಳದವರಿಂದ’ಅಪ್ಪೆ ಮಾಯಂದಾಲ್’ತುಳು ಯಕ್ಷಗಾನ ಬಯಲಾಟ

Suddi Udaya

ಪಣಕಜೆಯ ಸಬರಬೈಲು ಎಂಬಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪಿಕಪ್

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಜೋಹಾನ್ಸ್ ಗುಟೆನ್‌ಬರ್ಗ್ ಯೂನಿವರ್ಸಿಟಿಯ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತರಬೇತಿ

Suddi Udaya

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಮೋಹನ ರವರಿಗೆ ಚಿನ್ನದ ಪದಕ

Suddi Udaya

ಶ್ರೀ ಧಾಮ ಮಾಣಿಲದಲ್ಲಿಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ:ಬೆಳ್ತಂಗಡಿ ತಾಲೂಕಿನಿಂದ ಹೊರಕಾಣಿಕೆ ಸಲ್ಲಿಸಲು ಅವಕಾಶ: ಹರೀಶ್ ಕಾರಿಂಜ

Suddi Udaya
error: Content is protected !!