July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉದ್ಯೋಗಾವಕಾಶಗಳನ್ನು ಒದಗಿಸುವುದೇ ಗುರಿ – MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಸಂಸ್ಥೆಗಳ ಜಾಗೃತಿ ಅಭಿಯಾನದ ವಾಹನ ತಾಲೂಕಿನಾದ್ಯಂತ ಮನೆ ಬಾಗಿಲಿಗೆ – ಚಾರ್ಮಾಡಿಯಿಂದ ಚಾಲನೆ

ಬೆಳ್ತಂಗಡಿ: ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ (MFSE) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಇದೀಗ ಬೆಳ್ತಂಗಡಿಯಲ್ಲಿ ವೃತ್ತಿಪರ ಮತ್ತು ಪ್ರೊಫೆಶನಲ್ ಕೋರ್ಸ್ ಗಳಲ್ಲಿ ಡಿಪ್ಲೊಮಾ ಪಿಜಿ ಡಿಪ್ಲೋಮಾ ಕೋರ್ಸುಗಳನ್ನು ಕೇಂದ್ರ ಸರ್ಕಾರ ಅಂಗೀಕೃತ NSDC ಪ್ರಮಾಣ ಪತ್ರದೊಂದಿಗೆ ಮಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯಿಂದ ವಿವಿಧ ಕೋರ್ಸು ಗಳ ಬಗ್ಗೆ ಬೆಳ್ತಂಗಡಿ ತಾಲೂಕಿನ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ಮತ್ತು ಪ್ರಯೋಜನ ಹಾಗೂ ಉದ್ಯೋಗಾವಕಾಶದ ಪ್ರಯೋಜನಗಳನ್ನು ಪಡೆಯಬಹುದು ಎಂಬಿತ್ಯಾದಿ ವಿಷಯಗಳ ತರಬೇತಿ ವಿಷಯಗಳ ಜಾಹೀರಾತು ವಾಹನಕ್ಕೆ ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಭವ್ಯ ಚಾಲನೆಯನ್ನು ಮೇ 12 ರಂದು ಬೆಳ್ತಂಗಡಿಯ ಚಾರ್ಮಾಡಿಯಿಂದ ಆರಂಭಗೊಂಡಿತು.

ಜಾಹೀರಾತು ವಾಹನದ ಉದ್ಘಾಟನೆ ಮತ್ತು ಚಾಲನೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಸಮಾಜಸೇವಕ ಚಾರ್ಮಾಡಿಯ ಹಸನಬ್ಬ ನೆರವೇರಿಸಿ ಮಾತನಾಡಿ “ಇಂತಹ ತರಬೇತಿ ಸಂಸ್ಥೆಗಳು ಗ್ರಾಮೀಣ ಯುವಕರಿಗೆ ಹೊಸ ದಿಕ್ಕು ತೋರಿಸುತ್ತವೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರೊಫೆಶನಲ್ ಕೋರ್ಸ್ ಗಳು ಅತೀ ಅಗತ್ಯ ಇಂತಹ ಸೇವೆಗಳನ್ನು ನೀಡುವ ಎಂ ಜಿ ತಲ್ಹತ್ ಸವಣಾಲು ಇವರು ಮತ್ತು ಇವರ ತಂಡದ ಸೇವೆ ಶ್ಲಾಘನೀಯ” ಎಂದು ಮೆಚ್ಚುಗೆ ಸೂಚಿಸಿದರು.

ಚಾಲನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜಿ. ತಲ್ಹತ್ ಸವಣಾಲು, ಸಂಸ್ಥೆಯ ಮತ್ತೊಬ್ಬ ನಿರ್ದೇಶಕರಾದ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮುಹಮ್ಮದ್ ಅಝ್ಮಾನ್ ಕಕ್ಕಿಂಜೆ, ಉದ್ಯಮಿ ಯುರೋಪ್ ಜಾರ್ಜ್ , ಸುಪ್ರೀಮ್ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ ಇದರ ಉನೈಸ್ ಸುಪ್ರೀಮ್ ಹಾಗೂ ಸಾರ್ವಜನಿಕರು, ಊರಿನ ಸರ್ವ ಸಾರ್ವಜನಿಕರು ಉಪಸ್ಥಿತರಿದ್ದರು.

ಜಾಹೀರಾತು ವಾಹನವು ನವೀನ ರೀತಿಯಲ್ಲಿ ವಿನ್ಯಾಸಗೊಳ್ಳಿಸಿದ್ದು, ವಿವಿಧ ವೃತ್ತಿಪರ ಕೋರ್ಸ್‌ಗಳ ವಿವರ, ಸಂಸ್ಥೆಯ ಸಂಪರ್ಕ ಮಾಹಿತಿ ಮತ್ತು ಭವಿಷ್ಯ ನವೀನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಹೊಂದಿದೆ. ಇದೇ ವೇಳೆ ಉದ್ಘಾಟನಾ ಕೊಡುಗೆಯಡಿಯಲ್ಲಿ ಕೆಲವು ಕೋರ್ಸ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಯಿತು.

ಅನುಗ್ರಹ ಟ್ರೈನಿಂಗ್ ಕಾಲೇಜು ಸಾವಿರಾರು ಯುವಕರಿಗೆ ಉಚಿತ ಮತ್ತು ಕಡಿಮೆ ಶುಲ್ಕದಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯಾಗಿದ್ದು, ಇದರ ಸೇವೆಗಳು ರಾಜ್ಯದಾದ್ಯಂತ ಪ್ರಭಾವ ಬೀರುತ್ತಿವೆ.

ಆಸಕ್ತ ವಿದ್ಯಾರ್ಥಿಗಳು ದಾಖಲಾತಿಗೆ ಅನುಗ್ರಹ ಟ್ರೈನಿಂಗ್ ಕಾಲೇಜು, ಶ್ರೀ ರಾಮ ಕಾಂಪ್ಲೆಕ್ಸ್, ಸಂತೆಕಟ್ಟೆ, ಬೆಳ್ತಂಗಡಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ: 8861112182

Related posts

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಹೊಳೆಯಲ್ಲಿ ಮೀನುಗಳು ಸಾವು

Suddi Udaya

ಕುವೆಟ್ಟು: ಮನೆಗೆ ನುಗ್ಗಿದ್ದ ಕಳ್ಳರು: ನಗದು ಸಹಿತ ರೂ. 3.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಬೆಳ್ತಂಗಡಿ: ಮಿಷ್ ಮಷ್ ಫ್ಯಾನ್ಸಿಯಲ್ಲಿ ಲಕ್ಕಿ ಡ್ರಾ: ರೂ.499 ರ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್

Suddi Udaya

ಮೇ 5: ಕುಂಡದಬೆಟ್ಟು ಮಂಜುಶ್ರೀ ಭಜನಾ ಮಂಡಳಿಯ ಪ್ರಾಯೋಜಕತ್ವದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ಮನ್ ಷ್ಯರ್ ಅಕಾಡಮಿಯ ಕಾಲೇಜು ಉಪಪ್ರಾಂಶುಪಾಲೆ ಗೌತಮಿ ಶರಣ್. ಪಿ. ಆರ್.ಪ್ರಾಂಶುಪಾಲರಾಗಿ ಪದೋನ್ನತಿ

Suddi Udaya
error: Content is protected !!