ವೇಣೂರು: ಎಸ್,ಎಸ್.ಎಲ್.ಸಿ ಪರೀಕ್ಷೆಯಲ್ಲಿ ವೇಣೂರು ಪ್ರೌಢಶಾಲೆ ಗೆ ಪ್ರಥಮ ಹಾಗೂ ತಾಲೂಕಿಗೆ ಮೂರನೇ ಸ್ಥಾನ ( 625/621 )ಪಡೆದ ಮೂಡುಕೋಡಿ ಗ್ರಾಮದ ಹುಲ್ಲೋಡಿ ವನಿತಾ ಸದಾನಂದ ಪೂಜಾರಿಯವರ ಪುತ್ರಿ ಸುಪ್ರಿಯಾ ಎಸ್ ಇವರನ್ನು ಮೂಡುಕೋಡಿ ಬಿಲ್ಲವ ಸಂಘ ಮತ್ತು ವೇಣೂರು ಯುವವಾಹಿನಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷ ಶುಭಕರ್ ಪೂಜಾರಿ ಸಾವ್ಯ, ಯುವವಾಹಿನಿ ಕೇಂದ್ರ ಸಮಿತಿಯ ಆಂತರಿಕ ಲೆಕ್ಕ ಪರಿಶೋಧಕರಾದ ಅರುಣ್ ಕೋಟ್ಯಾನ್ , ಮೂಡುಕೋಡಿ ಗ್ರಾಮ ಸಮಿತಿಯ ಅಧ್ಯಕ್ಷ ರವೀಂದ್ರ ಪೂಜಾರಿ, ವೇಣೂರು ಬಿಲ್ಲವ ಸಂಘದ ಕಾರ್ಯದರ್ಶಿಗಳಾದ ರಾಕೇಶ್ ಕುಮಾರ್ ಮೂಡುಕೋಡಿ, ಕೋಶಾಧಿಕಾರಿಗಳಾದ ಯೋಗೀಶ್ ಬಿಕ್ರೋಟ್ಟು, ಪ್ರಮುಖರಾದ ನ್ಯಾಯವಾದಿ ಸತೀಶ್ ಪಿ ಏನ್, ವಸಂತ್ ಕೋಟ್ಯಾನ್ ವಿಕೆ ಇಲೆಕ್ಟ್ರಾನಿಕ್ಸ್ , ಅಂಡಿಂಜೆ ಗ್ರಾ. ಪಂ.ಸದಸ್ಯರಾದ ಸುರೇಶ್ ಪುಂಡಿಕಾಯರ್, ನವೀನ್ ಪೂಜಾರಿ, ಸುಧಾಕರ್ ಪೂಜಾರಿ ,ನಿತ್ಯಾನಂದ ಉಪಸ್ಥಿತರಿದ್ದರು.











