30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ, ಶಿಲಾನ್ಯಾಸ

ಬೆಳ್ತಂಗಡಿ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ.
ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ನ ಶಾಖಾ ಮಠಕ್ಕೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಭೂಮಿ ಪೂಜೆ ಹಾಗೂ ಶಿಲಾನ್ಯಾಸವು ಮೇ 19 ರಂದು ನಡೆಯಿತು.

ಸುಮಾರು ರೂ 15 ಕೋಟಿ ವೆಚ್ಚದಲ್ಲಿ, 35 ಸಾವಿರ ಚದರಡಿಯಲ್ಲಿ 4 ಅಂತಸ್ತಿನ ಭವನ ನಿರ್ಮಾಣ. ಶಾಖಾ ಮಠದಲ್ಲಿ ಸತ್ಸಂಗ ಹಾಲ್,ಮೀಟಿಂಗ್ ಹಾಲ್,ಸ್ವಾಮೀಜಿಯ ಕೊಠಡಿ,ಡೈನಿಂಗ್,ಕಿಚನ್,ವಿವಿಐಪಿ,ವಿಐಪಿ ರೂಮ್,ಲಿಪ್ಟ್ ಸೌಲಭ್ಯ, ಮಲ್ಟಿ ಪರ್ಪಸ್ ಹಾಲ್ ನಿರ್ಮಾಣವಾಗಲಿದೆ.

ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ನೇತಾರರು ಭಾಗವಹಿಸಿದರು. ಪ್ರಧಾನ ವಿಭೂತಿ ಪುರುಷರಾದ ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್ ಪಂಚದಶನಾಮ್ ಜುಣಾ ಅಖಾಡ, ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಶನಾಮ್ ಜುನಾ ಅಖಾಡ., ಮಹಂತ್ ಡಾ| ಸ್ವಾಮಿ ಭರತ್ ದಾಸ್‌ಜೀ ಮಹಾರಾಜ್ ಉದಾಸೀನ್ ಸಂಘತ್ ಋಷಿ ಆಶ್ರಮ್ ರಾಣೋಪಾಲಿ ಅಯೋಧ್ಯೆ,ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್ ಸಚಿವ ಶ್ರೀ ಪಂಚದಶನಾಮ್ ಜುನಾ ಅಖಾಡ ಹರಿದ್ವಾರ, ಮಹಂತ್ ಸುರೇಶ್ ದಾಸ್‌ಜೀ ಮಹಾರಾಜ್ ದಿಗಂಬರ ಅಖಾಡ ಅಯೋಧ್ಯೆ., ಮಹಂತ್ ಕಮಲನಯನ್ ದಾಸ್‌ಜೀ ಮಹಾರಾಜ್ ಚೋಟಿ ಚಾವಣಿ ಅಯೋಧ್ಯೆ, ಮಹಂತ್ ಅವದೇಶ್ ದಾಸ್‌ಜೀ ಮಹಾರಾಜ್ ಬಡಾಭಕ್ತಮಹಲ್ ಅಯೋಧ್ಯಾಧಾಮ್, ಮಹಂತ್ ರಾಜ್‌ಕುಮಾರ್ ದಾಸ್‌ಜೀ ಮಹಾರಾಜ್ ರಾಮವಲ್ಲಭ ಕುಂಜ ಅಯೋಧ್ಯಾಧಾಮ್, ಮಹಂತ್ ಸಂಜಯ್ ದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್, ಮಹಂತ್ ರಾಜೂದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್,ಸಚಿವ ಮಾಂಕಲ್ ವೈದ್ಯ,ಶಾಸಕ ಹರೀಶ್ ಪೂಂಜ,ನಿವೃತ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ನಿವೃತ ಎಸ್.ಪಿ ಪೀತಾಂಬರ ಹೆರಾಜೆ, ಮಂಗಳೂರು ಕಾರ್ಪೋರೇಟರ್ ಕಿರಣ್ ಕುಮಾರ್, ಉದ್ಯಮಿಗಳಾದ ಸತೀಶ್ಚ್ಚಂದ್ರ ಸಾಲಿಯಾನ್ ಪಾಣಿಲ, ಕರುಣಾಕರ ಸುವರ್ಣ ,ಪ್ರಮುಖರಾದ ಜಯಂತ್ ಕೋಟ್ಯಾನ್, ಪ್ರೀತಮ್ ಧರ್ಮಸ್ಥಳ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ರತ್ನಾಕರ ಬುಣ್ಣನ್, ರಾಜೇಶ್ ಮೂಡುಕೋಡಿ, ಪ್ರೇಮ ಉಮೇಶ್, ಸುಜಾತ ಅಣ್ಣಿ ಪೂಜಾರಿ, ಸಹಕಾರಿ ಅಭಿವೃದ್ದಿ ಅಧಿಕಾರಿ ಪ್ರತೀಮಾ, ರವೀಂದ್ರ ಅರ್ಲ, ತುಕರಾಮ್, ಸೀತರಾಮ ಬೆಲಾಲು, ಜನಾರ್ಧನ ಕುಕ್ಕೇಡಿ, ಜಯಾನಂದ ಕಲ್ಲಾಪು, ಮಹೇಶ್ ಬಾಯಾರ್, ಯೋಗೀಶ್ ಕೊಕ್ಕಡ, ಹರೀಶ್ ಕಳೆಂಜ, ಸುನಿಲ್ ಉಪ್ಪಿನಂಗಡಿ,ಮಂಜುನಾಥ ಸಾಲಿಯಾನ್, ಮಹಾಬಲ, ಪ್ರವೀಣ್ ಫೆರ್ನಾಂಡೀಸ್ ಉಜಿರೆ, ‍ಪ್ರಶಾಂತ್ ಮಚ್ಚಿನ, ನವೀನ್ ಗರ್ಡಾಡಿ, ರಾಜೇಶ್ ಎಂ.ಕೆ ಕಾಯರ್ತಡ್ಕ, ಬೆಳ್ತಂಗಡಿ ಪತ್ರಕರ್ತರರಾದ ಮನೋಹರ್ ಬಳಂಜ, ಸಂತೋಷ್ ಪಿ ಕೋಟ್ಯಾನ್, ಚೈತ್ರೇಶ್ ಇಳಂತಿಳ, ದೀಪಕ್ ಅಠವಳೆ, ಜಾರಪ್ಪ ಪೂಜಾರಿ, ಭುವನೇಶ್ ಗೇರುಕಟ್ಟೆ ಹಾಗೂ ಬೆಳ್ತಂಗಡಿಯಿಂದ ಸ್ವಾಮೀಜಿಯ ಭಕ್ತರು ಸುಮಾರು200 ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು.

Related posts

ಕುವೆಟ್ಟು: ಎರಂಗಲ್ಲು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಿಂಹ ಸಂಕ್ರಾಂತಿ ಕೊಪ್ಪರಿಗೆ ಏರುವ ಶುಭ ಸಂದರ್ಭ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ಅನೇಕ ಭಕ್ತರು ಭಾಗಿ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯರಿಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ ಅಲ್ಪಸಂಖ್ಯಾತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಸಚಿವ ಬಿ ಜೆಡ್ ಜಮೀರ್ ಅಹಮ್ಮದ್ ಖಾನ್ ರವರಿಗೆ ರಕ್ಷಿತ್ ಶಿವಾರಾಂ ರಿಂದ ಮನವಿ

Suddi Udaya

ಶ್ರೀ ಭಗವದ್ಗೀತಾ ಸ್ಪರ್ಧೆ : ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಹಂಸಿನಿ ಭಿಡೆಗೆ ರಾಜ್ಯಮಟ್ಟದಲ್ಲಿ ತೃತೀಯ ಬಹುಮಾನ

Suddi Udaya

ಕುಕ್ಕೇಡಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿ ಗೆ ಹೆಚ್ಚುವರಿ ರೂ.50 ಲಕ್ಷ ಅನುದಾನ ಮಂಜೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya
error: Content is protected !!