July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

ಮಾಲಾಡಿ: ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಮೇ 12 ರಂದು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಪವಿತ್ರ ಬುದ್ಧ ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ‌

ಬೌದ್ಧ ಮಹಾಸಭಾದ ಅಧ್ಯಕ್ಷ ಸುನೀಲ್ ಮಾಲಾಡಿ ಹಾಗೂ ಅದೇ ದಿನ 25 ನೇ ವರ್ಷದ ಮದುವೆ ದಿನದ ಸಂಭ್ರಮದಲ್ಲಿದ್ದ ಗುಲಾಬಿ ಆನಂದ ದಂಪತಿಗಳು ಭಗವಾನ್ ಬುದ್ಧನ ಮೂರ್ತಿಯ ಎದುರು ಕ್ಯಾಂಡಲ್ ಉರಿಸಿ ಚಾಲನೆ ನೀಡಿದರು. ಹಿರಿಯರಾದ ಬಿ.ಕೆ.ಚೆನ್ನಪ್ಪ ಹಾಗೂ ಕೇಶವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.‌

ಕಿರಿಯರಾದ ಪ್ರಣಮ್ ಶರಣ್ ಸುಜ್ನಾತ್ ಹಾಗೂ ಶ್ರವಣ್ ದೀಪ ಬೆಳಗಿಸಿದರು.‌ ಬಳಿಕ ಹಿರಿಯ ಉಪಾಸಕರಾದ ಬಾಬಿ ಮಡಂತ್ಯಾರು ಇವರು ಬುದ್ಧವಂದನೆ, ಧಮ್ಮವಂದನೆ ಹಾಗೂ ಸಂಘವಂದನೆಯನ್ನು ನಡೆಸಿಕೊಟ್ಟರು. ಸುಕೇಶ್ ಕೆ ಸ್ವಾಗತಿಸಿದರು.

Related posts

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ಶ್ರೀರಾಮ ನವಮಿ ಪ್ರಯುಕ್ತ ಮಠದ ಪಟ್ಟದ ದೇವರಿಗೆ ಪಂಚಾಮೃತ ಅಭಿಷೇಕ ರಾಮೋತ್ಸವ

Suddi Udaya

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಸೀಯಾಳಾಭಿಷೇಕ

Suddi Udaya

ಕಳಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ್ ಶೆಟ್ಟಿ ಆಯ್ಕೆ

Suddi Udaya

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜೆ

Suddi Udaya

ಬೆಳ್ತಂಗಡಿ: ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಟಿ.ಡಿ ರಾಘವೇಂದ್ರರವರ ಮಾತೃಶ್ರೀ ನಾಗರತ್ನಮ್ಮ ನಿಧನ

Suddi Udaya
error: Content is protected !!