24.2 C
ಪುತ್ತೂರು, ಬೆಳ್ತಂಗಡಿ
June 15, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಶಿಶಿಲ ದೇವಾಲಯ ವ್ಯವಸ್ಥಾಪನಾ ಸಮಿತಿ ರಚನೆಗೆ ಮೀನ ಮೇಷ..ಭಕ್ತರ ಆಕ್ರೋಶ

ಶಿಶಿಲ: ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ರಚನೆಗೆ ಎರಡು ವರ್ಷಗಳಿಂದ ಮೀನ ಮೇಷ ನಡೆಯುತ್ತಿದೆ.

ಜೀರ್ಣೋದ್ಧಾರ ಮತ್ತು ಎರಡು ಬ್ರಹ್ಮಕಲಶವನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಕೀರ್ತಿ ಗ್ರಾಮಸ್ಥರಿದ್ದು. ಇದೀಗಿನ ರಾಜಕೀಯ ವ್ಯವಸ್ಥೆಯಿಂದ ಇನ್ನೂ ವ್ಯವಸ್ಥಾಪನಾ ಸಮಿತಿಯು ರಚನೆಯಾಗದೆ ಬಾಕಿಯಿರುವುದಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಿತಿ ಇಲ್ಲದೆ ದೇವಾಲಯದ ಎಲ್ಲಾ ಅಭಿವೃದ್ಧಿ ಕಾರ್ಯ ನಿಂತಿದೆ. ಸಾವಿರಾರು ಊರ‌ ಪರವೂರಿಂದ ಭಕ್ತಾದಿಗಳು ಬರುತ್ತಿದ್ದಾರೆ.ಅನ್ನ ದಾಸೊಹ ನಡೆಯುತ್ತಿದೆ. ಮತ್ಸ್ಯ ಸಂಕುಲಗಳಿದ್ದಾವೆ. ಕೃಷಿ ನಿರ್ವಹಣೆ ಆಗಬೇಕಾಗಿದೆ. ಹೀಗಿದ್ದರೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಆಯ್ಕೆ ಆಗಿದ್ದಾರೊ ಇಲ್ಲವೊ ಇನ್ನೂ ಮಾಹಿತಿ ಇಲ್ಲ. ಮುಜರಾಯಿ ಇಲಾಖೆಯನ್ನು ಸಂಪರ್ಕಿಸಿದರೆ ಜವಾಬ್ದಾರಿ ಉತ್ತರವಿಲ್ಲ. ಗ್ರಾಮದ ಊರ ಪರವೂರ ದಾನಿಗಳಿಂದಲೆ ಅಭಿವೃದ್ಧಿ ಆಗಿರುವ ಈ ಪುಣ್ಯಕ್ಷೇತ್ರಕ್ಕೆ ಈ ರೀತಿಯ ಸಮಿತಿ ರಚನೆಗೆ ಯಾಕೆ ತಡವಾಗುತ್ತಿದೆ ಎಂಬ ಮಾಹಿತಿ ಇಲ್ಲ.


ಆದುದರಿಂದ ಕೂಡಲೆ ವ್ಯವಸ್ಥಾಪನಾ ಸಮಿತಿ ರಚಿಸುವಂತೆ ಭಕ್ತರು ಆಗ್ರಹಿಸಿದ್ದಾರೆ ಹಾಗೂ ಮುಜರಾಯಿ ಇಲಾಖೆಗೂ ಮಾಹಿತಿ ನೀಡಿರುತ್ತಾರೆ.

ತಪ್ಪಿದ್ದಲ್ಲಿ ಗ್ರಾಮದ ಭಕ್ತಾಧಿಗಳೆ ಊರ ಭಕ್ತರ ಸಭೆ ಕರೆದು ಪ್ರತಿಭಟನೆಗೆ ಮುಂದಾಗುವುದಾಗಿ ಮಾಜಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಿಶಿಲ ಬಿ.ಜಯರಾಮ ನೆಲ್ಲಿತ್ತಾಯ ಮತ್ತು ಕರುಣಾಕರ ಶಿಶಿಲ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಚಾರ್ಮಾಡಿ: ಕೊಟ್ರಬೆಟ್ಟು ನಿವಾಸಿ ಕೃಷಿಕ ಪದ್ಮಯ್ಯ ಗೌಡ ನಿಧನ

Suddi Udaya

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

Suddi Udaya

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

Suddi Udaya

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ: ವಿಜಯ ಕುಮಾರ್ ಜೈನ್ ಹಾಗೂ ಅರುಣ್ ಕುಮಾರ್ ಜೈನ್ ರವರಿಂದ ಒಂದೇ ದಿನ 22 ದೇವಸ್ಥಾನ, ಬಸದಿ, ದೈವಸ್ಥಾನ ಹಾಗೂ ಮಂದಿರ ಭೇಟಿ

Suddi Udaya

ಬೆಳ್ತಂಗಡಿ: ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ದಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya
error: Content is protected !!