September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

ಉಜಿರೆ: ಸ್ಟಾರ್ಟಅಪ್ ಇನ್ಕುಬೇಶನ್ ಹಾಗೂ ಉದ್ಯಮಶೀಲತೆ ಉತ್ತೇಜಿಸುವ ಸಲುವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ನಕ್ಸ್ಟ್‌ಅಲೈನ್ ಮತ್ತು ಟೆಲೊಕ್ವೆನ್ಸ್ ಎಂಬ ಸ್ಟಾರ್ಟಪ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ.


“ಈ ಸಹಯೋಗದ ಮೂಲಕ ವಿದ್ಯಾರ್ಥಿಗಳಿಗೆ ನವೀನ ತಂತ್ರಜ್ಞಾನಗಳಲ್ಲಿ ಅನುಭವ ಪಡೆಯಲು, ಸ್ವ-ಉದ್ಯಮ ಕೈಗೊಳ್ಳಲು ಸಹಾಯವಾಗುವಂತೆ ತಂತ್ರಜ್ಞರಿಂದ ಮಾರ್ಗದರ್ಶನ ಹಾಗೂ ನೈಜ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರಂಭಿಸಿರುವ ಈ ಅವಕಾಶವು ವಿದ್ಯಾರ್ಥಿಗಳನ್ನು ಉದ್ಯೋಗದಾತರನ್ನಾಗಿಯೂ ರೂಪಿಸಲು ಸಹಕಾರಿಯಾಗಿರುತ್ತದೆ” ಎಂದು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ ಚಂದ್ರ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಟೆಲೊಕ್ವೆನ್ಸ್ ನ ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀಮತಿ ಅಕ್ಷತಾ ಜೈನ್, ಪ್ರವೀಣ್ ಗೋರೆ (ಟೆಲೊಕ್ವೆನ್ಸ್), ನಕ್ಸ್ಟ್‌ಅಲೈನ್ ನಿರ್ದೇಶಕ ವಿಜಯ್, ಡಿಲೈತ್‌ನಿರ್ದೇಶಕ ಅರುಣ್ ರಾಜಪುರೋಹಿತ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಮತ್ತು ಸ್ಟಾರ್ಟಪ್‌ಸ್ಕ್ವೇರ್ ಸಂಯೋಜಕರಾದ ಡಾ. ಬಸವ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಬೆಳಾಲು ಮೈತ್ರಿ ಯುವಕ ಮಂಡಲ ವತಿಯಿಂದ ಸರಸ್ವತಿ ಹಿ.ಪ್ರಾ. ಶಾಲಾ ಮುಂಭಾಗದಲ್ಲಿ ಬ್ಯಾರಿಕೆಡ್ ಅಳವಡಿಕೆ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya

ಕಾರಿಂಜ ಶ್ರೀ ವನಶಾಸ್ತಾರ ಮತ್ತು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಗ್ರಾಣ , ಕಾರ್ಯಾಲಯ ಹಾಗೂ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್  ಪಡೆದ ಚಿನ್ಮಯ್ ರವರಿಗೆ ಉಜಿರೆ ವಲಯ ಹಾಗೂ ಉಪ್ಪಿನಂಗಡಿ ಮಂಡಲದ ವತಿಯಿಂದ ಗೌರವ

Suddi Udaya

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

Suddi Udaya
error: Content is protected !!