ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿನ ಐವರು ಎನ್ ಸಿ ಸಿ ಕ್ಯಾಡೆಟ್ಗಳು ಶ್ರೀನಗರದಲ್ಲಿ ನಡೆಯುವ ವಿಶೇಷ ರಾಷ್ಟ್ರೀಯ ಏಕತಾ ಶಿಬಿರಕ್ಕೆ (SNIC) ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲು ಆಯ್ಕೆಗೊಂಡಿದ್ದಾರೆ.
ಜೆ.ಯು.ಓ ಯಶ್ವಿತಾ, ಸರ್ಜಂಟ್ ಆಲ್ವಿನ್ ಡಿಸೋಜಾ, ಕ್ಯಾಡೆಟ್ ನವ್ಯಾ, ಕ್ಯಾಡೆಟ್ ಕೃತಿ ಮತ್ತು ಕ್ಯಾಡೆಡ್ ಅನೀಶ್ ಆಯ್ಕೆಗೊಂಡವರು. ವಿವಿಧ ಕಾಲೇಜುಗಳ ಎನ್ ಸಿ ಸಿ ಕ್ಯಾಡೆಟ್ಗಳನ್ನು ಒಳಗೊಂಡ ಈ ತಂಡವು ಜೊತೆಯಲ್ಲಿ ಶ್ರೀನಗರಕ್ಕೆ ತೆರಳುತ್ತಿದೆ.
ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಈ ತಂಡದ ಮುಖ್ಯಸ್ಥರಾಗಿ ಸೆಕ್ರೆಟ್ ಹಾರ್ಟ್ ಕಾಲೇಜಿನ ಎನ್ .ಸಿ. ಸಿ ಅಧಿಕಾರಿ ಲೆಫ್ಟಿನೆಂಟ್ ಆಲ್ವಿನ್ ಕೆ.ಜಿ ಅವರನ್ನು ನೇಮಕ ಮಾಡಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ-ಗೋವಾ ನಿರ್ದೇಶನಾಲಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದಕ್ಕಾಗಿ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಎನ್ಸಿಸಿ ವಿದ್ಯಾರ್ಥಿಗಳ ಮತ್ತು ಅಧಿಕಾರಿಯ ಈ ವಿಶೇಷ ಸಾಧನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.