September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

ವೇಣೂರು: ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜೂ. 17 ರಂದು ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿ, ಪಲ್ಲಂದೋಡಿ ಬಜಿರೆಯಲ್ಲಿ “ಸಂಸ್ಕಾರ ಸಿಂಧೂರ” ಎಂಬ ಕಾರ್ಯಕ್ರಮದಡಿ ಸನಾತನ ಸಂಸ್ಕೃತಿಯ ಮೆಲುಕು -ಚಿಂತನ ಮಂಥನ ಕಾರ್ಯಕ್ರಮ ಆರಂಭಗೊಂಡಿತು.

ಜಂತೋಡಿಗುತ್ತು ಪ್ರವೀಣ್ ಚಂದ್ರ ಜೈನ್ ರವರಿಂದ ದೀಪೋಜ್ವಲನದ ಮೂಲಕ ಉದ್ಘಾಟನೆಯಾದ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀ ದ.ಕ.ಜಿಲ್ಲೆ ಯ ಅಧ್ಯಕ್ಷ ತಾರಾನಾಥ ಕೊಟ್ಟಾರಿ, ಫರೆಂಗಿಪೇಟೆ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಕಾರ ಭಾರತೀ ದ.ಕ.ಜಿಲ್ಲೆಯ ಗೌರವಾಧ್ಯಕ್ಷ ಸರಪಾಡಿ ಅಶೋಕ್ ಶೆಟ್ಟಿ, ಸಂಸ್ಕಾರ ಭಾರತೀ ಕರ್ನಾಟಕ ಪ್ರಾಂತ ದ ಸಹ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಮಂಗಳೂರು, ವೇಣೂರಿನ ಉದ್ಯಮಿಗಳಾದ ಭಾಸ್ಕರ್ ಪೈ, ಸಂಸ್ಕಾರ ಭಾರತೀ ದ.ಕ.ದ ಕೋಶ ಪ್ರಮುಖ್ ಶ್ರೀಮತಿ ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಥಮ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಜನನದಿಂದ ಮರಣದವರೆಗಿನ ಆಚರಣೆಗಳಲ್ಲಿನ ಬದಲಾವಣೆಗಳು ಎಂಬ ವಿಚಾರದಲ್ಲಿ ಚಿಂತನೆ ನಡೆಸಿದವರು ಸಾಮರಸ್ಯ ಟೋಳಿಯ ವಿಭಾಗ ಪ್ರಮುಖ್ ಸುರೇಶ್ ನರ್ಕಳ, ಸಂ‌.ಭಾ.ಕರ್ನಾಟಕ ಪ್ರಾಂತದ ಕೋಶ ಪ್ರಮುಖ್ ರಘುವೀರ್ ಗಟ್ಟಿ, ಸಂ.ಭಾ.ದ.ಕ ಜಿಲ್ಲೆಯ ಉಪಾಧ್ಯಕ್ಷ ದತ್ತಾತ್ರೇಯ ರಾವ್ ಪುತ್ತೂರು, ಸಂ.ಭಾ.ದ.ಕ.ಜಿಲ್ಲೆಯ ಸಾಹಿತ್ಯ ಸಂಯೋಜಕರಾದ ಶ್ರೀಮತಿ ಶಂಕರಿ ಶರ್ಮ ಪುತ್ತೂರು ಉಪಸ್ಥಿತರಿದ್ದರು.

ಸಂ.ಭಾ.ದ.ಕ.ಜಿಲ್ಲೆಯ ಕಾರ್ಯಕಾರಿಣಿ ಸದಸ್ಯ ಪಿ.ಎನ್.ಪರುಷೋತ್ತಮ ರಾವ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಾಂಗ್ರೆಸ್ ಸರಕಾರದ ವಿರುದ್ಧ ಹಾಲಿನ ದರ ಏರಿಕೆ, ಪ್ರೋತ್ಸಾಹ ಧನ ಬಿಡುಗಡೆ ಮಾಡದಿರುವ ಬಗ್ಗೆ ಬೆಳ್ತಂಗಡಿ ಮಹಿಳಾ ಮೋರ್ಚಾದ ವತಿಯಿಂದ ಬ್ಲ್ಯಾಕ್ ಟೀ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

Suddi Udaya

ಕೊಕ್ಕಡ: ಪದ್ಮನಾಭ ಆಚಾರ್ಯ ಹೃದಯಾಘಾತದಿಂದ ನಿಧನ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಾನವ ಆರೋಗ್ಯ, ಸಮುದಾಯ ಆರೋಗ್ಯ ಮತ್ತು ವೈಯಕ್ತಿಕ ನೈರ್ಮಲ್ಯದ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾಯ೯ಕಾರಿಣಿ ಸಭೆ

Suddi Udaya

ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

Suddi Udaya

ಪೆರೋಡಿತ್ತಾಯಕಟ್ಟೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ರಚನೆ

Suddi Udaya
error: Content is protected !!