ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೂ 23 ರಂದು ತಣ್ಣೀರುಪಂತ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟಾನಕಾರರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಮಹಾಬಲ ಗೌಡ ಪ್ರಧಾನ ಭಾಷಣಗೈದರು. ಶಕ್ತಿ ಕೇಂದ್ರ ಅಧ್ಯಕ್ಷ ಬೊಮ್ಮಯ್ಯ ಬಂಗೇರ, ತಾಲೂಕು ಕಾರ್ಯಕಾರಿಣಿ ಸದಸ್ಯ ಪ್ರಭಾಕರ ಪೊಸದೊಂಡಿ, ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ಪಾಲೇದು, ರುಕೇಶ್ ಮುಂದಿಲ, ಸಾಮ್ರಾಟ್ ಕರ್ಕೇರ, ಪ್ರಿಯಾ, ದಿವ್ಯಾ, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕರಾದ ಜಯಂತಿ ಪಾಲೇದು, ಕೃಷ್ಣಪ್ಪ ಗೌಡ, ರಜನಿನಾಥ್ ಮುಂದಿಲ ಸಹಿತ ಕಾರ್ಯರ್ಕತರು ಭಾಗವಹಿಸಿದ್ದರು.












