July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಧೀಮಹಿ ಸನಾತನ ಪ್ರತಿಷ್ಠಾನದಿಂದ ಯಕ್ಷಗಾನ ಹಿಮ್ಮೇಳ  ತರಗತಿ ಆರಂಭ

ವೇಣೂರು: ವೇಣೂರಿನ ಮಹಾವೀರ ನಗರದಲ್ಲಿ ಇರುವ ಧೀಮಹಿ ಸನಾತನ ಪ್ರತಿಷ್ಠಾನದಿಂದ ನಡೆಸಲ್ಪಡುವ ಯಕ್ಷಗಾನ ಹಿಮ್ಮೇಳ  ತರಗತಿಯ ಉದ್ಘಾಟನೆಯನ್ನು ಮಾತೃಶ್ರೀ ಗೌರಮ್ಮನವರು ದೀಪ ಪ್ರಜ್ವಲಿಸುವ ಮೂಲಕ ಜೂ.22 ರಂದು ನೆರವೇರಿಸಿದರು.

ಧೀಮಹಿ ಸನಾತನ ಪ್ರತಿಷ್ಠಾನದ ಧ್ಯೇಯೋದ್ದೇಶಗಳನ್ನು ಪ್ರಸ್ತಾವಿಕ ನುಡಿಯಲ್ಲಿ ಸಂಚಾಲಕರಾದ ಯಜ್ಞನಾರಾಯಣ ಭಟ್ ವಿವರಿಸಿದರು. ಮುಖ್ಯ ಅತಿಥಿಗಳಾಗಿ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಂಜಾಲಬೈಲು ಎನ್. ಪುರುಷೋತ್ತಮ ರಾವ್, ಭಾಸ್ಕರ ಪೈ ಹಾಗೂ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಾಣೂರು ಅಶೋಕ ಅವರು ಶುಭ ಹಾರೈಸಿದರು.


ಯಕ್ಷಗಾನ ತರಗತಿಯ ಗುರುಗಳಾಗಿ ಖ್ಯಾತ ಹಿಮ್ಮೇಳವಾದಕ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಬೋಧನಾ ಕ್ರಮದ ಬಗ್ಗೆ ಪರಿಚಯಿಸಿದರು. ರವಿಶಂಕರ ಭಟ್ ಬೆದ್ರಡ್ಕ ವಂದಿಸಿದರು. ಜಗನ್ನಾಥ ದೇವಾಡಿಗ ಹಂದೇವು ಕಾರ್ಯಕ್ರಮ ನಿರೂಪಿಸಿದರು.

ವೇಣೂರು ಸುತ್ತಮುತ್ತಲಿನ ನೂರಕ್ಕೂ ಅಧಿಕ ಯಕ್ಷಭಿಮಾನಿಗಳು ನೆರೆದಿದ್ದರು. ಹಿಮ್ಮೇಳ ಕಲಿಯಲು ಆಸಕ್ತರು ಕೊಂಕಣಾಜೆ ಚಂದ್ರಶೇಖರ ಭಟ್ಟರನ್ನು 91 90081 36127 ಸಂಪರ್ಕಿಸಬಹುದು.

Related posts

ಅಕ್ರಮ ಮರಳು ಸಾಗಿಸುತ್ತಿದ್ದ ಎರಡು ಲಾರಿ ಪೊಲೀಸರ ವಶ: ತಹಶೀಲ್ದಾರ್ ತಂಡ ಕಾರ್ಯಾಚರಣೆ

Suddi Udaya

ಗ್ರಾಮೀಣ ಭಾಗದ ಮನ್‌‌ಶರ್ ಕಾಲೇಜ್ ನ ರಾಜ್ಯ ಮಟ್ಟದ ಸಾಧನೆ ಪ್ರಶಂಶನೀಯ; ವಿಧಾನ ಸಭಾಪತಿ ಯು. ಟಿ. ಖಾದರ್

Suddi Udaya

ಪುತ್ತೂರು ವಿನ್ಸೆಂಟ್ ಪ್ರಕಾಶ್ ಪಿಂಟೋ ಹಾಗೂ ತೇರೆಸಾ ಪಿಂಟೋ ರವರಿಂದ ಮೇಲಂತಬೆಟ್ಟು ಅಂಗನವಾಡಿ ಮಕ್ಕಳಿಗೆ ಪಾದರಕ್ಷೆ ವಿತರಣೆ

Suddi Udaya

ನಾರಾವಿ: ಸಂತ ಅಂತೋನಿ ಶಿಕ್ಷಣ ‘ಸಂಸ್ಥೆಗಳ ದಿನಾಚರಣೆ’

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ಧರ್ಮಸ್ಥಳ: ಮುಳಿಕ್ಕಾರ್ ಭಾರಿ ಗಾಳಿ ಮಳೆಗೆ ಹಾನಿಯಾದ ಮನೆಗೆ ಧರ್ಮಸ್ಥಳ ಗ್ರಾ.ಪಂ. ನಿಂದ ಆರ್ಥಿಕ ನೆರವು

Suddi Udaya
error: Content is protected !!